ಬಳ್ಳಿಗಾವೆ

Author : ಪಿ. ವಿ. ನಾರಾಯಣ

Pages 52

₹ 4.00




Year of Publication: 1987
Published by: ಐಬಿಎಚ್ ಪ್ರಕಾಶನ
Address: ಐಬಿಎಚ್ ಪ್ರಕಾಶನ, #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.
Phone: 080 - 48371555

Synopsys

ಪಿ.ವಿ ನಾರಾಯಣ ಅವರ ಕೃತಿ ಬಳ್ಳಿಗಾವೆ. ಹನ್ನೊಂದು ಹನ್ನೆರಡನೆಯ ಶತಮಾನಗಳಲ್ಲಿ ಬಳ್ಳಿಗಾವೆ ತುಂಬ ಪ್ರಖ್ಯಾತವಾದ, ಪ್ರಮುಖವಾದ ಊರಾಗಿದ್ದಿತು. ಧರ್ಮಗಳಿಗೆ ಇಲ್ಲಿ ಸಿಗುತ್ತಿದ್ದ ಪ್ರೋತ್ಸಾಹಕ್ಕಾಗಿ, ಇಲ್ಲಿ ದೊರೆಯುತ್ತಿದ್ದ ಶ್ರೇಷ್ಠ ರೀತಿಯ ವಿದ್ಯಾಭ್ಯಾಸಕ್ಕಾಗಿ, ಇಲ್ಲಿ ನಿರ್ಮಿತವಾಗಿದ್ದ ಪವಿತ್ರ ದೇವಾಲಯಗಳಿಗಾಗಿ ಇದು ತುಂಬ ಹೆಸರುವಾಸಿಯಾದ ಊರಾಗಿತ್ತು. ಬಳ್ಳಿಗಾವೆ ಈಗ ಒಂದು ಸಣ್ಣ ಹಳ್ಳಿ, ಕುಗ್ರಾಮ ಎನ್ನ ಬಹುದು. ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಶಿಕಾರಿಪುರ ತಾಲ್ಲೂಕಿದೆ. ಆ ತಾಲ್ಲೂಕಿನ ಶಿರಾಳಕೊಪ್ಪಕ್ಕೆ ಒಂದು ಮೈಲಿದೂರ ದಲ್ಲಿ ಅದೇ ಹೋಬಳಿಗೆ ಸೇರಿದ ಊರು ಈ ಬಳ್ಳಿಗಾವೆ. ಈ ಊರಿರುವ ಪ್ರದೇಶ ಮಲೆನಾಡೆನಿಸಿಕೊಳ್ಳುವುದಿಲ್ಲ. ಆದರೆ ಇದು ಮಲೆನಾಡಿಗೆ ಅಂಟಿಕೊಂಡ ಸೆರಗು. ಈ ಪ್ರದೇಶಕ್ಕೆ ಹೋದರೆ ಈಗಲೂ ಹಲವಾರು ಸಣ್ಣದೊಡ್ಡ ಕೆರೆಗಳು ಕಾಣಿಸುತ್ತವೆ. ಇವು ಗಳಲ್ಲಿ ತಾವರೆ ಮುಂತಾದ ನೀರಿನಲ್ಲಿ ಬೆಳೆಯುವ ಹೂವುಗಳು ಬೆಳೆದಿರುವುದನ್ನು ನೋಡಬಹುದು. ನೀರು ಹೀಗೆ ಸಮೃದ್ಧವಾಗಿ ದೊರೆಯುವುದೆಂದಮೇಲೆ ಬೆಳೆ ಯ ಚೆನ್ನಾಗಿರಲೇಬೇಕು ಹೀಗೆ ಬಳ್ಳಿಗಾವೆ ಎಂಬ ಕುಗ್ರಾಮದ ಸಂಪೂರ್ಣ ಅಧ್ಯಯನವನ್ನು ಪಿ.ವಿ ನಾರಾಯಣ ಅವರು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books