ಕನ್ನಡ-ಕನ್ನಡಿಗ-ಕರ್ನಾಟಕ ಪ್ರಜ್ಞೆ

Author : ಸಂಗಮೇಶ ತಮ್ಮನಗೌಡ್ರ

Pages 128

₹ 40.00




Year of Publication: 2013
Published by: ಸಿದ್ದೇಶ್ವರ ಪ್ರಕಾಶನ
Address: ಹಳೆಯ ಸರಾಫ್ ಬಜಾರ್, ಶ್ರೀ ಜಗದಂಬಾ ದೇವಿ ದೇವಸ್ಥಾನ ಹತ್ತಿರ, ಗದಗ-01
Phone: 9242469965

Synopsys

ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಬರೆದ ಕೃತಿ-ಕನ್ನಡ-ಕನ್ನಡಿಗ-ಕರ್ನಾಟಕ. ಕನ್ನಡ ತಾಯಿ ಭುವನೇಶ್ವರಿಯ ವೈಭವ, ಅವಳನ್ನು ಪ್ರಶಂಸಿಸಿದ ಕವಿಗಳು, ಆ ತಾಯಿ ವಿಶ್ವಕ್ಕೆ ನೀಡಿದ ಕೊಡುಗೆಗಳು, ಇಲ್ಲಿಯ ಶರಣ ಸಂಸ್ಕೃತಿ, ದಾಸರ- ತತ್ವಪದಕಾರರ ಪರಂಪರೆ, ಆಳಿದ ಅರಸರು, ವಿಸ್ತರಿಸಿದ್ದ ಕನ್ನಡದ ನೆಲ ಹೀಗೆ ಎಲ್ಲವನ್ನು ನೆನಪಿಸುವ ಹಾಗೂ ಹಿರಿಯ ಸಾಹಿತಿಗಳು ಬರೆದಿರುವ ಲೇಖನಗಳೊಂದಿಗೆ ಕನ್ನಡ ತಾಯಿ ಅಭಿಮಾನ ಪಡುವಂತೆ ಕೃತಿಯನ್ನು ಲೇಖಕರು ಸಮರ್ಪಿಸಿದ್ದಾರೆ.

 

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Related Books