ಆಡಳಿತದಲ್ಲಿ ಕನ್ನಡವೇ ಏಕೆ ಬೇಕು?

Author : ಮಹಾದೇವ ಬಣಕಾರ

Pages 88

₹ 120.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಆಡಳಿತದಲ್ಲಿ ಕನ್ನಡವೇ ಏಕೆ ಬೇಕು?’ ಕೃತಿಯು ಮಹದೇವ ಬಣಕಾರ ಅವರ ಲೇಖನಸಂಕಲನವಾಗಿದೆ. ಈ ಕೃತಿಯು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ದಾಖಲೆಗಳನ್ನು ಈ ಕೃತಿಯು ಒಳಗೊಂಡಿದೆ. ಕನ್ನಡ ನಾಡಿನ ಬೇರೆ ಬೇರೆ ಭಾಗದಲ್ಲಿ ಆಡಳಿತ ನಡೆಸಿದ ವಿದೇಶೀಯರು ಕನ್ನಡವನ್ನು ಹೇಗೆ ಬಳಸಿದರು ಎನ್ನುವ ಮಹತ್ವದ ದಾಖಲೆಗಳು ಇಲ್ಲಿವೆ. ಇದು ಒಂದು ಕಡೆ ಇತಿಹಾಸದ ದಾಖಲಾತಿಯಾದರೆ ಇನ್ನೊಂದು ಕಡೆ ಭಾಷೆಯ ಬೆಳವಣಿಗೆಯ ದಾಖಲಾತಿಯೂ ಆಗಿದೆ. ಈ ಸಾಮಾಗ್ರಿಗಳನ್ನು ಬಳಸಿಕೊಂಡು ಹಲವು ಮಾದರಿಯ ಅಧ್ಯಯನಗಳು ನಡೆಯುವುದಕ್ಕೆ ಅವಕಾಶವಿದೆ. ಭಾರತೀಯ ಭಾಷೆಗಳಲ್ಲಿಯೇ ಅಪರೂಪ ಎನ್ನಿಸುವ ಈ ಕೃತಿಯ ಕನ್ನಡದ ಘನತೆಯನ್ನು ಹೆಚ್ಚಿಸುತ್ತದೆ ಇನ್ನೊಂದು ಕಡೆ ನಾವು ಗಮನಿಸಿದ ಚರಿತ್ರೆಯನ್ನೂ ಅನಾವರಣಗೊಳಿಸುತ್ತದೆ.

About the Author

ಮಹಾದೇವ ಬಣಕಾರ
(03 October 1932 - 17 November 2001)

ಮಹದೇವ ಬಣಕಾರರು ಧಾರವಾಡ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರಿನಲ್ಲಿ ದಿನಾಂಕ ಅಕ್ಟೋಬರ್ 3, 1932ರಲ್ಲಿ ಹುಟ್ಟಿದರು. ಹೈಸ್ಕೂಲು ಮೆಟ್ಟಿಲು ಹತ್ತಿದ್ದೇ ಜಾಸ್ತಿ. ಎಮ್ಮೆ ಕಾಯುವಾಗ ಕಟ್ಟಿದ ಹಾಡು, ವಚನ ರೂಪದ ಹಾಡುಗಳು ಸೇರಿ, 18ರ ಹರೆಯದಲ್ಲಿಯೇ ಪ್ರಕಟಿಸಿದ ಕವನ ಸಂಕಲನ ‘ಕಾವ್ಯೋದಯ’. ಸಾಲಿ ರಾಮಚಂದ್ರರಾಯರು ಮುನ್ನುಡಿ ಬರೆದಿದ್ದರು.    ‘ಗೀಯ ಗೀಯ ಗಾ ಗಿಯ ಗೀಯ ನಾವು ಬಂದೇವ, ನಾವು ಬಂದೇವ ನಾವು ಬಂದೇವ ಶ್ರೀಶೈಲ ನೋಡಲಿಕ್ಕ ಸ್ವಾಮಿ ಸೇವಾ ಮಾಡಿಬಂದು ಹೋಗಲಿಕ್ಕ’ ಈ ಹಾಡು ಬರೆದವರು ಮಹಾದೇವರೆ.  ಬಡತನ ಬುತ್ತಿಯ ಗಂಟ ಬಾಯಿಯಲಿ ಕಚ್ಚಿಕೊಂಡು ಹಳ್ಳವ ಸೇರಿದ ನಾಯಿ ದಡದ ...

READ MORE

Related Books