ಕನ್ನಡ ಪ್ರಜ್ಞೆ

Author : ಬರಗೂರು ರಾಮಚಂದ್ರಪ್ಪ

Pages 220

₹ 80.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯಲ್ಲಿ ಕನ್ನಡ ಭಾಷೆಯು ಶಿಕ್ಷಣ, ಆಡಳಿತ, ಉದ್ಯೋಗ, ರಂಗಭೂಮಿ, ಚಲನಚಿತ್ರದಂತಹ ರಂಗಗಳಲ್ಲಿ ಬಲಿಷ್ಠ ಶಕ್ತಿಯಾಗಿ ರೂಪುಗೊಳ್ಳಬೇಕಾದ ಬಗೆಗಳನ್ನು ಚಿಂತನೆ ಮತ್ತು ಪ್ರಯೋಗಗಳ ದೃಷ್ಟಿಯಿಂದ ವಿಮರ್ಶಿಸಲಾಗಿದೆ. ಕನ್ನಡ ಸಂಸ್ಕೃತಿಗೆ ಸಂಬಂಧಿಸಿದಂತೆ ಅನೇಕ ಸೂಕ್ಷ್ಮ ಸಂಗತಿಗಳನ್ನೂ ಇಲ್ಲಿ ಚರ್ಚಿಸಲಾಗಿದೆ. ಈ ಕೃತಿಯು ಹೊಂದಿರುವ ಅಧ್ಯಾಯಗಳೆಂದರೆ: ಕನ್ನಡಾಭಿಮಾನ, ಕನ್ನಡ ಮನಸ್ಸು ,ಭಾಷೆ ಮತ್ತು ತಂತ್ರಜ್ಞಾನ , ಪ್ರಾಥಮಿಕ ಶಿಕ್ಷಣ : ಭಾಷೆ ಮತ್ತು ಮಾಧ್ಯಮ , ಆಡಳಿತದಲ್ಲಿ ಕನ್ನಡ; ಉದ್ಯಮ ಉದ್ಯೋಗದಲ್ಲಿ ಕನ್ನಡ ,ಕನ್ನಡ, ಸಂಸ್ಕೃತಿ ಮತ್ತು ಸ್ವಾಯತ್ತತೆ , ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಬೇಡಿಕೆ ಮತ್ತು ರಾಜಕೀಯ , ಕನ್ನಡಕ್ಕೊಂದು ಕಾರ್ಯಸೂಚಿ , ಇಂಗ್ಲಿಷ್ ಕಲಿಕೆ ಮತ್ತು ಕನ್ನಡ ಚಳುವಳಿಗಳು ,ಮ ಕನ್ನಡ ಚಿತ್ರರಂಗ ಕನ್ನಡಪರ ಸಿನಿಮಾ ನೀತಿ ,ಮೂಕ ಮಹಾಕಾವ್ಯ ಮತ್ತು ಭಾಷೆ.

About the Author

ಬರಗೂರು ರಾಮಚಂದ್ರಪ್ಪ
(18 October 1946)

ಬಂಡಾಯ ಸಾಹಿತ್ಯ ಚಳವಳಿಯ ಪ್ರಮುಖ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕತೆ-ಕಾದಂಬರಿ-ಕಾವ್ಯಗಳಂತಹ ಸೃಜನಶೀಲ ಕೃತಿಗಳ ಜೊತೆಗೆ ಚಿಂತನ ಪರ ಬರಹ, ವಿಮರ್ಶೆಗಳ ಮೂಲಕ ಹೆಸರಾದವರು. ರಾಮಚಂದ್ರಪ್ಪ ಅವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ, ನಿರ್ದೇಶಕ ಆಗಿದ್ದರು. ಸಾಹಿತ್ಯದಷ್ಟೇ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನಿಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ವಿಭಿನ್ನ ಹಾದಿ ಹಿಡಿದವರು. ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ...

READ MORE

Related Books