ಇಂದಿನ ಕರ್ನಾಟಕ

Author : ವಿ.ಕೃ. ಗೋಕಾಕ (ವಿನಾಯಕ)

Pages 112

₹ 2.00




Year of Publication: 1945
Published by: ಲಲಿತ ಸಾಹಿತ್ಯ ಮಾಲೆ
Address: ಧಾರವಾಡ

Synopsys

ವಿ. ಕೃ. ಗೋಕಾಕರ ವಿಶಿಷ್ಟ ಪರಿಕಲ್ಪನೆಯಲ್ಲಿ ಮೂಡಿದ ಬರಹಗಳು ಅಂದಿನ ಜೀವನ ಪತ್ರಿಕೆಯಲ್ಲಿ ಪ್ರಕಟವಾಗಿದ್ದವುಗಳು. ವ್ಯಕ್ತಿಚಿತ್ರ ಬರೆದಂತೆ ನಾಡಿನಮ ಪಟ್ಟಣಗಳ ಚಿತ್ರಣವನ್ನೂ ಕೊಡುವುದು ಸಾಧ್ಯವೆಂಬ ಆಲೊಚನೆಯಿಂದ ಮೂಡಿದ ಬರಹಗಳು. ಶಿವರಾಮ ಕಾರಂತ, ಸಿಂಪಿ ಲಿಂಗಣ್ಣ, ಮ.ಗ.ಶೆಟ್ಟಿ ಮೊದಲಾದವರು ಇಂಥ ಬರಹಗಳನ್ನು ಬರೆದರು. ಅವೆಲ್ಲವನ್ನು ಸಂಕಲಿಸಿ ಪ್ರಕಟಿಸುವ ಕೆಲಸ ಇಂದಿನ ಕರ್ನಾಟಕ ಮಾಲಿಕೆಯ ಪುಸ್ತಕಗಳಲ್ಲಿ ಆಗಿದೆ. ಗೋಕಾಕರ ಸಂಪಾದಕತ್ವದ ಈ ಕೃತಿ ಒಂದು ಮಹತ್ವದ ಆಕರದಂತಿದೆ.

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books