‘ಸಿರಿಗನ್ನಡಂ ಗೆಲ್ಗೆ’

Author : ಎಂ. ಚಿದಾನಂದಮೂರ್ತಿ

Pages 252

₹ 135.00

Buy Now


Year of Publication: 2013
Published by: ಸ್ನೇಹ ಬುಕ್ ಹೌಸ್‌
Address: 165,10ನೇ ಮುಖ್ಯರಸ್ತೆ, ಶ್ರೀನಗರ, ಪಿಇಎಸ್ ಕಾಲೇಜು ಹತ್ತಿರ, ಬೆಂಗಳೂರು
Phone: 9845031335

Synopsys

ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರು ಕನ್ನಡ ನಾಡು-ನುಡಿಯ ಕುರಿತು ಬರೆದ ಕೃತಿ-ಸಿರಿಗನ್ನಡಂ ಗೆಲ್ಗೆ. ರಾ.ಹ.ದೇಶಪಾಂಡೆ ಅವರು ಮೊಟ್ಟಮೊದಲಿಗೆ ಸಿರಿಗನ್ನಡಂ ಗೆಲ್ಗೆ ಎಂದು ಉಚ್ಛರಿಸಿದವರು. ಆ ಮೂಲಕ ಕನ್ನಡಿಗರ ಅಭಿಮಾನವನ್ನು ಹೆಚ್ಚಿಸಿದವರು. ಕನ್ನಡಿಗರಿಗೆ ಒಂದು ಮಂತ್ರಸದೃಶವಾದ ಘೋಷಣೆ ನೀಡಿದವರು. ಕವಿರಾಜ ಮಾರ್ಗದಿಂದ ಹಿಡಿದು ನಂತರದ ಕನ್ನಡ ಕವಿಗಳ ಹಾಗೂ ಅವರ ಸಾಹಿತ್ಯವನ್ನು ವಿಶ್ಲೇಷಣೆ ಮಾಡಿದ ಲೇಖಕರು, ಕನ್ನಡ ನಾಡು, ಕರುನಾಡು, ಕರ್ಣಾಟ, ಕರ್ಣಾಟಕ, ಕರ್ನಾಟಕ ಹೀಗೆ ಯಾವುದೇ ರೀತಿ ಬರೆದು ಉಚ್ಛರಿಸಿದರೂ ಕನ್ನಡದ ಗೌರವ-ಹಿರಿಮೆ ಮಸುಕಾಗದು. ಇಂತಹ ಚಿಂತನೆಗಳ ಕೃತಿ ಇದು.

About the Author

ಎಂ. ಚಿದಾನಂದಮೂರ್ತಿ
(10 May 1931)

ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ...

READ MORE

Related Books