ವಿಜಯನಗರ

Author : ಎಂ.ಪಿ. ಪ್ರಕಾಶ

Pages 153

₹ 425.00




Year of Publication: 2010
Published by: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ
Address: ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು

Synopsys

‘ವಿಜಯನಗರ’ ಎಂ. ಪಿ. ಪ್ರಕಾಶ್‌, ಸೀತಾಲಕ್ಷ್ಮಿ ಶ್ರೀನಿವಾಸ್‌, ಆರ್‌. ಗೋಪಾಲ್‌ ಅವರ ಅನುವಾದ ಕೃತಿಯಾಗಿದೆ. ಈ ಕೃತಿಯು ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯಗಳ ನಿರ್ದೆಶನಾಲಯದ ವತಿಯಿಂದ, 1856 ಹಾಗೂ 1983ರಲ್ಲಿ ತೆಗೆದ ವಿಜಯನಗರದ (ಹಂಪಿಯ) ಸ್ಮಾರಕಗಳ ಸರಿಜೋಡಿಯ ಛಾಯಾಚಿತ್ರಗಳ ಪುಸ್ತಕವನ್ನಾಗಿ ಹೊರತಂದಿದೆ. ವಿಜಯನಗರವು ಭಾರತೀಯರನ್ನು ಹಾಗೂ ವಿದೇಶಿಯರನ್ನು ತನ್ನ ಉತ್ತುಂಗ ಸ್ಥಿತಿಯಲ್ಲಿ ಮತ್ತು ಭಗ್ನಾವಶೇಷ ಸ್ಥಿತಿಯಲ್ಲೂ ಒಂದೇ ರೀತಿಯಾಗಿ ಆಕರ್ಷಿಸಿದೆ. ಈ ನಗರದ ಭವ್ಯತೆಯ ಶ್ಲಾಘನೆಯನ್ನು ಅಬ್ದುರ್ ರಜಾಕ್, ಡೊಮಿಂಗೊ ಪೇಜ್, ನೂನಿಜ್ ಹಾಗೂ ಇತರ ಸಮಕಾಲೀನ ಪ್ರವಾಸಿಗರ ವರದಿಗಳಲ್ಲಿ ಓದಿ ತಿಳಿದುಕೊಳ್ಳಬೇಕಷ್ಟೆ. ಆದುದರಿಂದ ಅಲೆಕ್ಸಾಂಡರ್ ಜೆ. ಗ್ರೀನ್‌ಲಾ 1856 ರಷ್ಟು ಹಿಂದೆಯೇ ಛಾಯಾಚಿತ್ರಗಳ ಮೂಲಕ ಈ ಮಹಾನಗರದ ಸ್ಮಾರಕಗಳನ್ನು ದಾಖಲೆ ಮಾಡಿರುವುದು ಆಶ್ಚರ್ಯವೇನಲ್ಲ. ಭಾರತದಲ್ಲಿ ಛಾಯಾಚಿತ್ರಣವು ಶೈಶವಾವಸ್ಥೆಯಲ್ಲಿದ್ದಾಗ್ಯೂ ಈಸ್ಟ್ ಇಂಡಿಯಾ ಕಂಪನಿಯು ಈ ಮಹಾನಗರವನ್ನು ದಾಖಲೆಗಾಗಿ ಆಯ್ಕೆ ಮಾಡಿರುವುದನ್ನು ನೋಡಿದಾಗ ಆ ಸಮಯದಲ್ಲಿ ಸಹ ವಿಜಯನಗರವು ಎಂತಹ ಹೆಮ್ಮೆಯ ಸ್ಥಾನವನ್ನು ಹೊಂದಿತ್ತೆಂಬುದು ಕಂಡುಬರುತ್ತದೆ

About the Author

ಎಂ.ಪಿ. ಪ್ರಕಾಶ
(11 July 1940)

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರ ಕೆರೆ ಗ್ರಾಮದಲ್ಲಿ 1940ರ ಜುಲೈ 11 ರಂದು ಎಂ.ಪಿ. ಪ್ರಕಾಶ (ಮರಿಸ್ವಾಮಯ್ಯ ಮಠದ ಪಾಟೀಲ ಪ್ರಕಾಶ) ಜನಿಸಿದರು. ಲೇಖಕ, ನಟ, ರಂಗಕರ್ಮಿ, ಮೃದುಭಾಷಿ, ಸಾಂಸ್ಕೃತಿಕ ಜೀವಿ   ಹಾಗೂ ಸಜ್ಜನ ರಾಜಕಾರಣಿ ಹೀಗೆ ಬಹುಮುಖ ವ್ಯಕ್ತಿತ್ವದ ಎಂ.ಪಿ.ಪ್ರಕಾಶ, ವೃತ್ತಿಯಿಂದ ವಕೀಲರು. 1964 ರಲ್ಲಿ ಹಡಗಲಿಗೆ ಆಗಮಿಸಿ, 1973 ರಲ್ಲಿ ವಿಧಾನ ಪರಿಷತ್ತಿಗೆ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 1979 ರಲ್ಲಿ ಹಡಗಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಆದರೂ ಛಲಬಿಡದೇ 1983 ರಲ್ಲಿ ಹಡಗಲಿ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರು. ಅಂದಿನಿಂದ ರಾಜಕೀಯ ಜೀವನದಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ...

READ MORE

Related Books