ಸಾಹಿತಿ ವಿ. ಸೀತಾರಾಮಯ್ಯ ಅವರು ಬರೆದ ಕರ್ನಾಟಕ ಕಾದಂಬರಿ ಕೃತಿಯನ್ನು 1957ರಲ್ಲಿ ಮೊದಲನೇ ಆವೃತ್ತಿ ಕಂಡಿತ್ತು. ಈಗಿರುವುದು ಎರಡನೇ ಆವೃತ್ತಿ. ಉಜ್ಜಯಿನಿಯ ಚಕ್ರವರ್ತಿ ತಾರಾಪೀಡ, ಮಹಾಶ್ವೇತೆ, ಚಂದ್ರಾಚೂಡ, ಕಾದಂಬರಿ, ಚಿತ್ರ ರಥ ಹಾಗೂ ಮದಿರೆ ಅವರ ಮಗಳಾಗಿ ಕಾದಂಬರಿ ಹುಟ್ಟುತ್ತಾಳೆ. ಒಟ್ಟಾರೆ ಈ ಕಾದಂಬರಿ ಕುರಿತಂತೆ ಕೃತಿ, ಕವಿ, ಕಥೆ, ಚಿತ್ರ, ಸನ್ನಿವೇಶ, ವ್ಯಕ್ತಿಗಳು, ಒಂದೆರೆಡು ವಿಶೇಷ ಸಂಗತಿಗಳು ಹೀಗೆ ವಿವಿಧ ಶೀರ್ಷಿಕೆಗಳಡಿ ಕಾದಂಬರಿಯ ಜೀವನ ವೃತ್ತಾಂತವನ್ನು ವಿವರಿಸುವ ಅದ್ಭುತ ಕೃತಿ ಇದು.
ಕವಿ, ವಿದ್ವಾಂಸ, ವಿಮರ್ಶಕ, ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ. (1920), ಎಂ. ಎ. (1922) ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು. ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (1923) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ...
READ MORE