ಕನ್ನಡ ಕಾದಂಬರಿ ಲೋಕದ ಅಗ್ರಗಣ್ಯರಲ್ಲಿ ಒಬ್ಬರಾದ ತ.ರ.ಸುಬ್ಬರಾವ್. ಇವರು ಬರೆದ ಒಂದು ಚಾರಿತ್ರಿಕ, ಐತಿಹಾಸಿಕ ಕಾದಂಬರಿಯೇ ನೃಪತುಂಗ. ರಾಷ್ಟ್ರಕೂಟರು ದಕ್ಷಿಣ ಭಾರತದಲ್ಲಿ ಬೃಹತ್ ಸಾಮ್ರಾಜ್ಯವನ್ನು ಸ್ಥಾಪಿಸಿ ದೀರ್ಘಕಾಲ ಆಳ್ವಿಕೆ ನಡೆಸಿದರು. ಕನ್ನಡ ನಾಡು ಗೋದಾವರಿಯಿಂದ ಕಾವೇರಿ ನದಿವರೆಗೆ ಇತ್ತು ಎಂಬ ಕಾವ್ಯವು(ಕವಿರಾಜ ಮಾರ್ಗ) ರಚನೆಯಾದದ್ದು, ಈ ರಾಜವಂಶರ ಕಾಲದಲ್ಲೇ. ಈ ಕಾದಂಬರಿಯು ರಾಷ್ಟ್ರಕೂಟರ ಪ್ರಮುಖ ದೊರೆ, ಅಹಿಂಸೆಯೇ ಸರ್ವ ಶ್ರೇಷ್ಠ ಧರ್ಮ ಎಂದು, ಹಾಗೂ ಚಕ್ರವರ್ತಿ, ಚಕ್ರವರ್ತಿಯಾಗಿ ಪಾಲಿಸಬೇಕಾದುದು ಪ್ರಜಾಧರ್ಮವೊಂದೇ ಎಂದು ತನ್ನ ಗುರು ಜೀನಸೇನಾಚರ್ಯರಿಂದ ಗುರೂಪದೇಶ ಪಡೆದ, 'ಅಮೋಘವರ್ಷ ನೃಪತುಂಗ'ನ ಕುರಿತ ಅಮೋಘ, ಅದ್ಭುವಾದ ಕಾದಂಬರಿಯಾಗಿದೆ. ಸಾವಿರ ವರ್ಷಗಳ ಹಿಂದಿನ ಕರ್ನಾಟಕ, ಭಾರತೀಯ ಚರಿತ್ರೆಯಲ್ಲಿ ಅಗ್ರಸ್ಥಾನ ಅರ್ಹನಾದ ನೃಪತುಂಗನ ಆಳ್ವಿಕೆಯಲ್ಲಿ ಎಷ್ಟು ಪ್ರಬುದ್ಧವಾಗಿತ್ತು ಎಂಬುದನ್ನು ತ.ರಾ.ಸುರವರು ಸುಂದರವಾಗಿ ಚಿತ್ರಿಸಿದ್ದಾರೆ.
ಕಾದಂಬರಿಗೆ ತ.ರ.ಸು ರವರ ಗುರುಗಳಾದ ಡಾ|| ಎಸ್. ಶ್ರೀಕಂಠಶಾಸ್ತ್ರೀಯವರು ಮುನ್ನುಡಿ ಬರೆದಿದ್ದು, ಈ ಕೃತಿಗೆ ಬೆನ್ನೆಲುಬಾಗಿ ನಿಂತಿದೆ. ತ.ರಾ.ಸುರವರು ಹೇಳುವಂತೆ ಈ ಕಾದಂಬರಿಯಲ್ಲಿ ಕೆಲವು ರೀತಿಯ ಊಹ ಚಿತ್ರಗಳನ್ನು ಬಳಸಿಕೊಂಡಿದ್ದಾರೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE