ಕನ್ನಡ ಕರ್ನಾಟಕ ನಾಡುನುಡಿಗಳ ಹಲವು ಅಂಕಿಅಂಶಗಳು

Author : ಟಿ. ಎಸ್.‌ ಗೋಪಾಲ್

Pages 88

₹ 80.00




Year of Publication: 2023
Published by: ನವಕರ್ನಾಟಕ ಪ್ರಕಾಶನ

Synopsys

ನವಕರ್ನಾಟಕ ಕನ್ನಡ ಮಾಲಿಕೆ-25 ರ ಅಡಿಯಲ್ಲಿ ಪ್ರಕಟಗೊಂಡ ಕೃತಿ ‘ಟಿ.ಎಸ್. ಗೋಪಾಲ್ ಅವರ ‘ಕನ್ನಡ ಕರ್ನಾಟಕ ನಾಡುನುಡಿಗಳ ಹಲವು ಅಂಕಿಅಂಶಗಳು’. ಇತಿಹಾಸದ ಕುರಿತ ವಿಚಾರಗಳು, ಕನ್ನಡ ನಾಡನ್ನು ಆಳಿದ ಪ್ರಮುಖ ರಾಜವಂಶಗಳು ಮತ್ತು ಅರಸರು, ಬಾದಾಮಿ ಚಾಲುಕ್ಯರು, ತಲಕಾಡಿನ ಗಂಗರು, ರಾಷ್ಟ್ರಕೂಟ ವಂಶ, ಕಲ್ಯಾಣದ ಚಾಲುಕ್ಯರು, ನೊಳಂಬ ವಂಶ, ಹೊಯ್ಸಳ ವಂಶ, ಆಳುಪ ವಂಶ, ದೇವಗಿರಿಯ ಸೇವುಣ ವಂಶ, ವಿಜಯನಗರ ಸಾಮ್ರಾಜ್ಯ, ಬಹುಮನಿ ಸುಲ್ತಾನರು, ಆದಿಲ್ ಷಾಹಿ ಸುಲ್ತಾನರು, ಕೆಳದಿಯ ಅರಸರು, ಮೈಸೂರು ಒಡೆಯರು ಹೀಗೆ ಹಲವಾರು ರಾಜವಂಶಗಳ ಮಾಹಿತಿಯನ್ನು ಈ ಕೈಪಿಡಿಯು ಒಳಗೊಂಡಿದೆ. ಅಷ್ಟೇ ಅಲ್ಲದೆ ಜಿಲ್ಲೆಗಳ ಮಾಹಿತಿ, ಪ್ರವಾಸಿ ತಾಣಗಳ ಕುರಿತು, ಕರ್ನಾಟಕದ ಕೃಷಿ ಮಾಹಿತಿ, ಕರ್ನಾಟಕದಲ್ಲಿರುವ ಎತ್ತರದ ಶಿಖರಗಳು, ನದಿಗಳು, ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿಧಾಮಗಳು, ಸಮುದ್ರತೀರಗಳು, ವಿಮಾನ ನಿಲ್ದಾಣಗಳು ಹೀಗೆ ಹಲವಾರು ವಿಚಾರಗಳನ್ನು ಕೃತಿ ಒಳಗೊಂಡಿದೆ.

About the Author

ಟಿ. ಎಸ್.‌ ಗೋಪಾಲ್

ಟಿ. ಎಸ್. ಗೋಪಾಲ್ ಅವರು ಕನ್ನಡದ ಲೇಖಕರು. ಕನ್ನಡ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಬಗ್ಗೆ ಆಸಕ್ತಿ ಹೊಂದಿರುವ ಇವರು, ಆ ಕುರಿತ ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ. ಹೀಗೆ ಈವರೆಗೆ ಗೋಪಾಲ್‌ ಅವರು ಒಟ್ಟು 40ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ಅವರ 'ಕಾಡು ಕಲಿಸುವ ಪಾಠ' ಕೃತಿಗೆ ವಿಜ್ಞಾನ ವಿಷಯದಲ್ಲಿ 2013ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ. ಅಲ್ಲದೆ ಹಲವಾರು ಲಲಿತ ಪ್ರಬಂಧಗಳು, ವಿಮರ್ಶಾ ಲೇಖನಗಳು ಹಾಗೂ ವನ್ಯಜೀವಿಸಂರಕ್ಷಣೆಯನ್ನು ಕುರಿತ ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಕಟವಾಗಿವೆ. ...

READ MORE

Related Books