ತಲೆಯೆತ್ತಲಿ ಕನ್ನಡತನ

Author : ಸಂಗಮೇಶ ತಮ್ಮನಗೌಡ್ರ

Pages 24

₹ 0.00




Year of Publication: 2015
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102
Phone: 9449074397

Synopsys

ಲೇಖಕ ಸಂಗಮೇಶ ತಮ್ಮನಗೌಡ್ರ ಅವರು 2015ರಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರು ಯಾವ ರೀತಿಯ ಪ್ರಛಾಣಿಕೆಗೂ ಮೊರೆ ಹೋಗದೇ ಕನ್ನಡ-ಕನ್ನಡಿಗ ಹಾಗೂ ಕರ್ನಾಟಕ ಹೀಗೆ ಕರುನಾಡಿನ ಸಮಗ್ರ ಸಾಂಸ್ಕೃತಿಕ ಅಭಿವೃದ್ಧಿಗಾಗಿ ಕನ್ನಡಿಗರಲ್ಲಿ ಜಾಗೃತಿ ಹಾಗೂ ಅಭಿಮಾನ ಮೂಡಿಸಲು ವಿಶಿಷ್ಟ ಹಾಗೂ ಅಪರೂಪದ ಕನ್ನಡ ಪ್ರಸಾರ ಹಾಗೂ ಪ್ರಚಾರ ಎನ್ನಬಹುದಾದ ರೀತಿಯಲ್ಲಿ ಕೃತಿ ಪ್ರಕಟಿಸಿದ್ದೇ -‘ತಲೆಯೆತ್ತಲಿ ಕನ್ನಡತನ’. ಈ ಕೃತಿಯಲ್ಲಿ ಈವರೆಗೆ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿರುವ ಮಹಿನೀಯರ ಅಧ್ಯಕ್ಷೀಯ ಭಾಷಣಗಳನ್ನು ಪ್ರಮುಖ ಆಶಯ-ಎಚ್ಚರಿಕೆ-ಅಭಿಮಾನ-ಸವಾಲು ಎದುರಿಸುವ ಅನಿವಾರ್ಯತೆ ಹೀಗೆ ಕನ್ನಡಕ್ಕೊದಗಿದ ಸಮಸ್ಯೆ ಹಾಗೂ ಅಸಹಾಯಕತೆಗಳನ್ನು ನಿವಾರಿಸಲು ಮಾಡಿರುವ ಕಳಕಳಿಯ ಮನವಿಗಳನ್ನು ಪ್ರಕಟಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಪ್ರಮುಖ ನುಡಿಗಳನ್ನು ಒಂದೆಡೆ ದಾಖಲೆಯಾಗಿ ನೀಡುತ್ತದೆ ಮಾತ್ರವಲ್ಲ; ಕನ್ನಡಿಗರ ಅಭಿಮಾನವನ್ನು ಮತ್ತೆ ಮತ್ತೆ ಕೆರಳಿಸಲು-ಪ್ರೇರೇಪಿಸಲು ಕಾರಣವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳು ಎಂದರೆ ಸಾರ್ವತ್ರಿಕವಾಗಿ ನಡೆಯುವ ಚುನಾವಣೆಗಳಂತಲ್ಲ. ಮರಿ ಪುಢಾರಿಗಳಾಗಿ ಹುಸಿ ಭರವಸೆಗಳನ್ನು ನೀಡುವುದಲ್ಲ, ಕನ್ನಡದ ಹಿರಿಯ ಕೊಡುಗೆ-ಅಧ್ಯಯನ ದೊಂದಿಗೆ ಆ ಪರಂಪರೆಯ ದ್ಯೋತಕವಾಗಿ ಕನ್ನಡಕ್ಕಾಗಿ ದುಡಿಯಬೇಕು ಎಂಬ ಮಾಗದರ್ಶನ-ಸಲಹೆ ರೂಪದಲ್ಲಿ ಎಚ್ಚರಿಕೆಯೂ ನೀಡುವಂತಿದೆ. ಮತ್ತು, ಸದ್ಯ, ಕನ್ನಡ-ಕನ್ನಡಿಗ ಹಾಗೂ ಕರ್ನಾಟಕಕ್ಕೆ ಇಂತಹ ಪ್ರಣಾಣಿಕೆ ಹಾಗೂ ಅದನ್ನು ಸಾಕಾರಗೊಳಿಸುವ ಏಕೈಕ ಅಗತ್ಯ ಹಾಗೂ ಅನಿವಾರ್ಯತೆ ಇದೆ; ಬೇರೇನೂ ಅಲ್ಲ ಎಂಬಂತೆ ಕನ್ನಡಿಗರ ಕಣ್ಣನ್ನು ತೆರೆಸುವಂತಿದೆ. 

 

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Excerpt / E-Books

ಕನ್ನಡ ಸಾಹಿತ್ಯ ಪರಿಷತ್ತು ನಾಡು-ನುಡಿ ಜಾಗೃತಿಯ ಇಂತಹ ಚಿಂತನೆಯನ್ನು ಕನ್ನಡ ಜನತೆಯ ಬಳಿ ಬಿಂಬಿಸಬೇಕಾಗಿದೆ. ಕಾಲಕಾಲಕ್ಕೆ ಇಂತಹ ಸಂಕಲ್ಪಗಳು ಹೊರಹೊಮ್ಮಿದಾಗ ನಾಡು-ನುಡಿ ಕಳಕಳಿಯಲ್ಲಿ ಏಕೆ ಬದಲಾವಣೆ ಬರುವುದಿಲ್ಲ? ನಾವು ಈ ನೆಲದ ಅನ್ನ, ನೀರು, ಗಾಳಿ ಸೇವಿಸಿ ನಮಗೆ ತಿಳಿದಂತೆ ಬದುಕುವುದರಲ್ಲಿ ಏನು ಅರ್ಥವಿದೆ? ನಾವು ವಿಶಿಷ್ಟ ವ್ಯಕ್ತಿಗಳಾಗಿ ಬದುಕೋಣ, ನಾಡಪ್ರೇಮ ಮೆರೆಯೋಣ.!

-(ಕೃತಿಯ ಮುನ್ನುಡಿಯಲ್ಲಿ ಲೇಖಕರು ಮಾಡಿರುವ ಮನವಿ)

Related Books