ಕರ್ನಾಟಕತ್ವದ ವಿಕಾಸ

Author : ಆಲೂರು ವೆಂಕಟರಾಯ

Pages 212

₹ 270.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

ಆಲೂರು ವೆಂಕಟರಾಯರ ‘ಕರ್ನಾಟಕತ್ವದ ವಿಕಾಸ’ ಕನಾಟಕ ಏಕೀಕರಣದ ಸಾಂಸ್ಕೃತಿಕ ಸಂಕಥನ. ಅವರ ಅನುಭವಗಳ ಜೊತೆಗೆ ಚಾರಿತ್ರಿಕ ಸಂಗತಿಗಳನ್ನು ದಾಖಲಿಸಿರುವ ಇದು ಅನೇಕ ಮಹತ್ವದ ಸಾಂಸ್ಕೃತಿಕ ಸಂಗತಿಗಳನ್ನು ಒಳಗೊಂಡಿದೆ. ಏಕೀಕರಣದ ಸಂದರ್ಭದಲ್ಲಿ ಹೊರಬಂದಿದ್ದ ಈ ಕೃತಿಯು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮತ್ತೊಮ್ಮೆ ಬಿಡುಗಡೆಗೊಂಡಿದೆ. ಕರ್ನಾಟಕತ್ವದ ಕಲ್ಪನೆಯ ಉಗಮ ಮತ್ತು ವಿಕಾಸಗಳು ನನ್ನಲ್ಲಿ ಹೇಗೆ ಉಂಟಾಗುತ್ತ ಹೋದವು ಎಂಬುದನ್ನು ಇಲ್ಲಿ ಲೇಖಕರಉ ವಿವರಿಸುತ್ತಾ ಹೋಗಿದ್ದಾರೆ. ಆನುಷಂಗಿಕವಾಗಿ ಲೇಖಕರೊಂದಿಗೆ ಕಾರ್ಯಮಾಡಿದ ಕೆಲವರ ಚಟುವಟಿಕೆಗಳೂ, ಆಗಿನ ಕಾಲದ ಕರ್ನಾಟಕತ್ವದ ಪ್ರಚಾರಕ್ಕಾಗಿ ಹುಟ್ಟಿದ ಸಂಸ್ಥೆಗಳ ಇತಿಹಾಸವೂ ಇಲ್ಲಿ ಬಂದಿದೆ.

About the Author

ಆಲೂರು ವೆಂಕಟರಾಯ
(12 July 1880 - 25 February 1964)

‘ಕರ್ನಾಟಕದ ಕುಲಪುರೋಹಿತ’ ಎನಿಸಿದ ಆಲೂರು ವೆಂಕಟರಾಯರು ಕನ್ನಡ -ಕರ್ನಾಟಕ ಕಟ್ಟುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿದವರು. ಧಾರವಾಡದಲ್ಲಿ 1880ರ ಜುಲೈ 12ರಂದು ಜನಿಸಿದ ವೆಂಕಟರಾಯರ ತಂದೆ ಭೀಮರಾಯ, ತಾಯಿ ಭಾಗೀರಥಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. (1903, ಎಲ್ಎಲ್ ಬಿ (1905) ಪದವಿ ಪಡೆದರು. ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದ ಆಲೂರು ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವುದಕ್ಕಾಗಿ ವಕೀಲಿವೃತ್ತಿ ಕೈ ಬಿಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸೂತ್ರಧಾರರಲ್ಲಿ ಒಬ್ಬರಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರ ...

READ MORE

Related Books