ಅನಿಕೇತನ ಕನ್ನಡ ಗಜಲ್ ಗಳು

Author : ಕಾಶೀನಾಥ ಅಂಬಲಗೆ

Pages 88

₹ 75.00




Year of Publication: 2019
Published by: ಪ್ರಗತಿ ಪ್ರಕಾಶನ
Address: ಜಯನಗರ ವಿಶ್ವವಿದ್ಯಾಲಯ ರಸ್ತೆ, ಕಲಬುರ್ಗಿ- 595105

Synopsys

ಲೇಖಕ ಕಾಶೀನಾಥ ಅಂಬಲಗೆ ಅವರ ಗಜಲ್ ಸಂಕಲನವಿದು. ಈಗ ನೀರಿನ ಅಂಗಡಿಗಳು, ಶಬ್ದಗಳ ದಾರಿಯಲಿ, ಕಾಗದಗಳ ಮೇಲೆ ನಕಾಶೆ, ಸುಂದರ ಗಜಲ್, ಪ್ರೀತಿಯ ಸುಗಂಧ, ಅದೊಂದು ವಿಚಿತ್ರ ದೃಶ್ಯ, ಹೂ ಮಾತ್ರ ಗಜಲ್ ಆಗಲಾರದು, ಹೊಂದಿಸಲು ಹೋಗಬೇಡ, ಮನೆ ಬೆಳಕಿನ ಮಿಂಚಿನಲಿ, ಸ್ವತಃ ಸ್ವಂತದ ಪಡಿಯಚ್ಚಲಿ, ಬದುಕು ನಮ್ಮದು ಗುರಿಯು ನಮ್ಮದು, ಗಾಳಿಯ ತುಂಟತನ, ಲೆಕ್ಕದ ಪುಸ್ತಕವಿದ್ದಂತೆ, ಬಾಯಿ ಹೊಲಿದುಕೊಂಡಿದ್ದರೇಕೆ, ಪ್ರತಿ ಕ್ಷಣ ಬದಲಾಗುತ್ತಿರುವುದೇಕೆ ಸೇರಿದಂತೆ 71 ಗಜಲ್ ಗಳಿವೆ.

About the Author

ಕಾಶೀನಾಥ ಅಂಬಲಗೆ
(10 July 1947)

ಕಾಶೀನಾಥ ಅಂಬಲಗೆ ಅವರು ಹುಟ್ಟಿದ್ದು 10-07-1947 ರಲ್ಲಿ. ಬೀದರ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಮುಚಳಂಬಿ ಎಂಬ ಗ್ರಾಮದಲ್ಲಿ. ಇವರ ತಂದೆ ರಾಚಪ್ಪ ಅಂಬಲಗೆ, ತಾಯಿ ಗುರಮ್ಮ ಅಂಬಲಗೆ. ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅಂಬಲಗೆ ಹಿಂದಿ ಭಾಷೆಯಲ್ಲೂ ಎಂ.ಎ ಪದವಿ ಗಳಿಸಿದ್ದಾರೆ. ಬಿ.ಎಡ್ ಜೊತೆಗೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪಿಎಚ್.ಡಿ ಪದವಿಯನಂತರ ಅಧ್ಯಾಪಕ ವೃತ್ತಿಯನ್ನು ಆಯ್ದುಕೊಂಡ ಅವರು ಮಹಾವಿದ್ಯಾಲಯದಲ್ಲಿ 21ವರ್ಷ, ವಿಶ್ವವಿದ್ಯಾಲಯದಲ್ಲಿ 12 ವರ್ಷ ಹಿಂದಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ತೊಡಗಿಸಿಕೊಂಡಿದ್ದಾರೆ.  ಕವಿ, ಲೇಖಕ, ಸಾಹಿತಿ, ಕಾದಂಬರಿಗಾರರಾದ ಅಂಬಲಗೆ ಅನುವಾದಕರಾಗಿಯೂ ಪ್ರಸಿದ್ಧರು. ಜೊತೆಗೆ ...

READ MORE

Related Books