ಗಾಳಿಗೆ ಬಳುಕಿದ ಬೆಳಕು

Author : ಚಿದಾನಂದ ಸಾಲಿ

Pages 192

₹ 1.00




Year of Publication: 2018
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: 2ನೇ ಮಹಡಿ, ಕನ್ನಡ ಭವನ, ರವೀಂದ್ರ ಕಲಾಕ್ಷೇತ್ರ ಜೆ.ಸಿ ರಸ್ತೆ, ಬೆಂಗಳೂರು -560001
Phone: 080-22211730

Synopsys

ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗಜಲ್ ರಚನಾ ಕಮ್ಮಟವನ್ನು ಹಮ್ಮಿಕೊಂಡಿತ್ತು. ಅದರ ನಿರ್ದೇಶಕರಾಗಿದ್ದವರು ಕವಿ ಚಿದಾನಂದ ಸಾಲಿ. 

ಗಜಲ್‌ ಬಗೆಗೆ ಅಗ್ರಮಾನ್ಯ ಸಾಹಿತಿಗಳು ಬರೆದ ಲೇಖನಗಳು ಹಾಗೂ ಕಮ್ಮಟದಲ್ಲಿ ರಚನೆಯಾದ ಗಜಲ್‌ ಕಾವ್ಯವವನ್ನು ಒಗ್ಗೂಡಿಸಿ ಸಂಕಲನ ಹೊರಬಂದಿದೆ. ಕನ್ನಡದಲ್ಲಿ ಛಂದಸ್ಸು, ಸವಾಲು, ನಿರೀಕ್ಷೆ ಇತ್ಯಾದಿ ಎಲ್ಲಾ ಮಗ್ಗುಲುಗಳಿಂದ ಸಾದ್ಯಂತವಾಗಿ ಪರಿಶೀಲಿಸುವ ಗಜಲ್ ಕುರಿತ ಮೊಟ್ಟಮೊದಲ ಪರಾಮರ್ಶನಾ ಗ್ರಂಥ ಇದು. ಗಜಲ್‌ಗೆ ಉರ್ದುವಿನ ಕೊಡುಗೆ, ಉಳಿದ ಕಾವ್ಯಕ್ಕೂ ಗಜಲ್‌ಗೂ ಇರುವ ವ್ಯತ್ಯಾಸ, ಅನುವಾದದ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನೂ ಕೃತಿ ವಿವರಿಸುತ್ತದೆ. 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books