ಕನಸು ಕನ್ನಡಿ

Author : ಸ್ಮಿತಾ ರಾಘವೇಂದ್ರ ಭಟ್

Pages 84

₹ 80.00




Year of Publication: 2020
Published by: ಸ್ಮಿತಾ ರಾಘವೇಂದ್ರ ಭಟ್
Address: ’ಸಿಂಧೂರ’ ಕಲ್ಲೇಶರ ಅಂಚೆ, ಅಂಕೋಲಾ ತಾಲೂಕು, ಉತ್ತರ ಕನ್ನಡ ಜಿಲ್ಲೆ.
Phone: 9620847174

Synopsys

ಲೇಖಕಿ ಸ್ಮಿತಾ ರಾಘವೇಂದ್ರ ಭಟ್ ಅವರ ಚೊಚ್ಚಲ ಕೃತಿ ’ಕನಸು ಕನ್ನಡಿ’ ಗಜಲ್ ಸಂಕಲನ. ಈ ಕೃತಿಗೆ ಬೆನ್ನುಡಿ ಬರೆದ ಎಸ್. ಎನ್. ಸೇತುರಾಂ, `ಬೆಳಕಿಲ್ಲದ ದಾರಿಯಲ್ಲಿ ಸಾಗಬಹುದು. ಮರು ಕನಸುಗಳೇ ಇಲ್ಲದ ದಾರಿಯಲ್ಲಿ ಸಾಗುವುದಾದರೂ ಹೇಗೆ? ದಿವಂಗತ ಗಿರೀಶ್ ಕಾರ್ನಾಡರ ಯಯಾತಿಯ ಮಾತು. ಕನಸ ಭಾವ ಕಾಡದ ಮನಸ್ಸು ಮನಸ್ಸೇ ಅಲ್ಲ! ಬೆನ್ನಟ್ಟದ ಬದುಕು ಬದುಕೇ ಅಲ್ಲ ! ಆದರೊಂದು, ಕನಸು ಯಾವತ್ತೂ ಅಸ್ಪಷ್ಟ, ಅಮೂರ್ತ, ಬದುಕು ಎಲ್ಲ ಸಾಧನೆಗಳ ತುಲನೆ. ಮೂರ್ತ ಮಾಪನದ ಹಂಗಲ್ಲಿರುವಾಗ ಅಮೂರ್ತ ಕನಸುಗಳು ಸಾಕಾರವಾಗುವುದಾದರೂ ಹೇಗೆ? ವರ್ತಮಾನದ, ವಾಸ್ತವದ ತೃಪ್ತಿಯಲ್ಲಿ ಕತ್ತಲ ನಿದ್ದೆ! ಭವಿಷ್ಯದ ಕನಸುಗಳ ಅತೃಪ್ತಿಯಲ್ಲಿ ಹಗಲ ಎಚ್ಚರ! ಈ ದ್ವಂದ್ವದಲ್ಲಿ ಕೆರಳಿದ ಎಲ್ಲ ಭಾವಗಳು ಈ ಗಜಲ್‌ಗಳಲ್ಲಿ ಜೀವಂತವಾಗಿವೆ.’ ಎಂದು ಪ್ರಶಂಸಿಸಿದ್ದಾರೆ.

About the Author

ಸ್ಮಿತಾ ರಾಘವೇಂದ್ರ ಭಟ್

ಲೇಖಕಿ ಸ್ಮಿತಾ ರಾಘವೇಂದ್ರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಗ್ರಾಮದವರು.ಕಥೆ,ಕವನ, ಗಜಲ್, ಭಾವಗೀತೆ, ಚುಟುಕು, ಲೇಖನ ಹಾಯ್ಕು ಹೀಗೆ ಸಾಹಿತ್ಯ ಹಲವು ಪ್ರಕಾರದ ಬರವಣಿಗೆ ಇವರ ಹವ್ಯಾಸಗಳು. ನಾಡಿನ ವಿವಿಧ ಪತ್ವಿರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿಯಲ್ಲಿ ಕಥೆ ಕವನಗಳ ವಾಚನ ಹಾಗೂ  ಮೈಸೂರು ದಸರಾ ಕವಿಗೋಷ್ಠಿ ಸೇರಿದಂತೆ ಹಲವು ವೇದಿಕೆಗಳಲ್ಲಿ ಕವನಗಳನ್ನು ಪ್ರಸ್ತುತಪಡಿಸಿದ್ದಾರೆ. ’ಕನಸು ಕನ್ನಡಿ’ ಎಂಬುದು ಇವರ ಮೊದಲ ಗಜಲ್ ಸಂಕಲನ. ...

READ MORE

Related Books