ಸಂತನೊಳಗಿನ ಧ್ಯಾನ

Author : ವಾಣಿ ಭಂಡಾರಿ

Pages 72

₹ 100.00




Year of Publication: 2020
Published by: ಭಂಡಾರಿ ಪ್ರಕಾಶನ
Address: ಬೈರಾಪುರ ರಿಪ್ಪನ್ ಪೇಟೆ, ತಾ ಹೊಸನಗರ-577426.ಜಿ: ಶಿವಮೊಗ್ಗ
Phone: 9845426931

Synopsys

‘ ಸಂತನೊಳಗಿನ ಧ್ಯಾನ’ ಕೃತಿಯು ವಾಣಿ ಭಂಡಾರಿ ಅವರ ಗಜಲ್ ಸಂಕಲನ.  ಕೃತಿಯ ಕುರಿತು ಅಲ್ಲಾಗಿರಿರಾಜ್ ಕನಕಗಿರಿ ಅವರು "ನಿನ್ನನ್ನು ನೀನು ಸಂಪೂರ್ಣವಾಗಿ ಭಸ್ಮ ಮಾಡಿಕೊಳ್ಳುವ ತನಕ ನೀನು ದುಃಖಗಳಿಂದ ತಪ್ಪಿಸಿಕೊಳ್ಳಲಾರೆ" ಎಂದು 12ನೇ ಶತಮಾನದ ಸೂಫಿ ಕವಿ ಫರೀದುದ್ದೀನ್ ಅತ್ತಾರ್ ಹೇಳಿದಂತೆ, ಸುಮಾರು ವರ್ಷಗಳಿಂದ ಸುಖ, ದುಃಖದ ನೆರಳಲ್ಲಿ ನರಳಿದ ವಾಣಿ ಭಂಡಾರಿ ಇತ್ತೀಚೆಗೆ ತನ್ನನ್ನು ತಾನೇ ಬದಲಿಸಿಕೊಂಡ ಆತ್ಮಧ್ಯಾನದ ಮಾರ್ಗ ಏನೆಂದರೆ, ಓದು ಮತ್ತು ಮನದ ಖುಷಿಗಾಗಿ ವಚನ, ಲೇಖನ. ಗಜಲ್, ಕಾವ್ಯಧಾಟಿಯ ಬರಹದ ಮೂಲಕ ತನ್ನೊಳಗಿನ ಬದಲಾವಣೆ ಕಂಡುಕೊಂಡ ವಿಚಾರಧಾರೆಯ ಫಲಿತಾಂಶವೇ “ಸಂತನೊಳಗಿನ ಧ್ಯಾನ" ಎಂಬ ಗಜಲ್ ಕೃತಿ ಎಂದೇಳಲು ಎನಗೆ ಹೆಮ್ಮೆ ಅನಿಸುತ್ತದೆ. ಲೇಖಕಿಯ ಈ ಗಜಲ್‌ ಶೇರ್ ತಣ್ಣಗೆ ಉತ್ತರಿಸುವ ಪರಿ ನೋಡಿದರೆ ನಿಜಕ್ಕೂ ಯಾವಾಗ ತಮ್ಮೊಳಗಿನ ಕವಿಗೆ, ಸಂತನಿಗೆ ಎಚ್ಚರಿಸುವ ಕಾಲವನ್ನು ಉಪಯೋಗಿಸಿಕೊಂಡು ವಾಸ್ತವದ ಆಟ ನಾಟಕಕ್ಕೆ ಮಾರ್ಮಿಕವಾಗಿ ಕವಿತೆ ಮೂಲಕ ಜವಾಬ್ ನೀಡುವರೋ ಬಲ್ಲವರಾರು? ಅದಕ್ಕೆ ಹೇಳಿದ್ದು 'ವಾಣಿ'ಯ ಗಜಲ್ ಬೆಳಗಿದ ಅರಿಯದೆ ತಿಳಿಯದೆ, ಏನೇನೋ ಹೇಳಬೇಡಿ ಎನ್ನುವ ಅವರ ಈ ಶೇರ್ ಬೆನ್ನ ಹಿಂದಿನ ಪ್ರೀತಿಯ ದುಷ್ಕ ನಗೆ ನಾಟದೇ ಇರಲಾರದು. “ಸಂತನೊಳಗಿನ ಧ್ಯಾನ" ಕಂಡು ಬಯಲು ಮಾತು ನಿಲ್ಲಿಸಿದೆ. ಬಡವರ ಕನಸಿನ ಚೀಲಗಳು ರಸ್ತೆ ಬದಿ ಬಿದ್ದು ನರಳುತ್ತಿವೆ”. ತುಂಬ ಸೂಕ್ಷ್ಮ ಸಂವೇದನ ಧಾಟಿಯ ಇಂಥ ಗಜಲ್‌ ಶೇರ್‌ಗಳ ನಡುವೆ ವಾಣಿ ಭಂಡಾರಿ ಅವರು, ತುಂಬ ಮಹತ್ವದ ಚೌಕಟ್ಟಿನ ಗಜಲ್ ಈ ಸಂಕಲನದ ಮೂಲಕ ನಾಡಿನ ಓದುಗರ ಬೊಗಸೆ ತುಂಬಿದ್ದಾರೆ’ ಎನ್ನುತ್ತಾರೆ.

About the Author

ವಾಣಿ ಭಂಡಾರಿ
(24 July 1982)

ವಾಣಿ ಭಂಡಾರಿ ಅವರು ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಭೈರಾಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಪದವೀಧರರು. ವೃತ್ತಿಯಿಂದ ಉಪನ್ಯಾಸಕರು. ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ, ಭಾವಗೀತೆ, ಕವನ,ಕಥೆ,  ನ್ಯಾನೋಕಥೆ, ಕಾದಂಬರಿ,ಚುಟುಕು,ಹನಿಗವನ,ಲೇಖನ, ಅಂಕಣ, ಶಾಯರಿ, ಗಜಲ್ ಆಧುನಿಕ ವಚನಗಳು, ತುಣುಕುಗಳು ಬರೆಯುವ ಹವ್ಯಾಸ. ನಾಡಿನ ಹಲವಾರು ಪತ್ರಿಕೆಯಲ್ಲಿ ವಿಮರ್ಶಾ ಅಂಕಣ, ಸತ್ಯವಾಣಿ ಕಟೋಕ್ತಿ, ವ್ಯಕ್ತಿತ್ವ ವಿಕಸನ ಅಂಕಣಗಳು ಪ್ರಕಟಗೊಂಡಿವೆ.  ಕೃತಿಗಳು : ಅಂತರ್ ದೃಷ್ಟಿ- ವಿಮರ್ಶಾ ಸಂಕಲನ, ತುಂಗೆ ತಪ್ಪಲಿನ ತಂಬೆಲರು ಭಾಗ:1+2 (ಸಂಶೋಧಾನ್ಮತಕ‌ ಕೃತಿ), ಸಂತನೊಳಗಿನ ಧ್ಯಾನ ...

READ MORE

Related Books