ನಿದಿರೆ ಇರದ ಇರುಳು

Author : ಮಂಡಲಗಿರಿ ಪ್ರಸನ್ನ

Pages 93

₹ 110.00




Year of Publication: 2023
Published by: ಸ್ಪಂದನ ಪ್ರಕಾಶನ
Address: ಸಿದ್ದಾಪುರ, ಉತ್ತರ ಕನ್ನಡ- 581355

Synopsys

ಮಂಡಲಗಿರಿ ಪ್ರಸನ್ನ ಅವರ ಗಜಲ್‌ ಸಂಕಲನ ಕೃತಿ ʻನಿದಿರೆ ಇರದ ಇರುಳುʼ. ಪ್ರಸ್ತುತ ಪುಸ್ತಕ 61 ಗಜಲ್ ರಚನೆಗಳ ಗುಚ್ಚವನ್ನು ಒಳಗೊಂಡಿದೆ. ನೆನಪು, ಪ್ರಕೃತಿಯ ಕೆಲವು ವಿಸ್ಮಯಗಳು, ಬೆಳಗಿನ ರಂಗೋಲಿ, ಹೂವುಗಳು, ಕನಸು, ಪ್ರೇಮ, ವಿರಹ, ತ್ಯಾಗ, ವಂಚನೆ, ತೃಪ್ತಿ ಹೀಗೆ ಮನುಷ್ಯ ಮತ್ತು ಪರಿಸರದ ಸಾವಯವ ಸಂಬಂಧವನ್ನು ಸಾರುವ ಅನೇಕ ಗಜಲ್‌ಗಳು ಇಲ್ಲಿವೆ. ನಿದ್ದೆಗೆಡಿಸುವ ಯಾತನೆಗಳು, ಮನುಷ್ಯನ ಒಳ ಸಂಕಟಗಳ ಭಾವನೆಗಳನ್ನು ಗಜಲ್‌ಗಳ ಉದ್ದಕ್ಕೂ ಕಾಣಬಹುದು.

About the Author

ಮಂಡಲಗಿರಿ ಪ್ರಸನ್ನ
(18 October 1963)

ರಂಗಭೂಮಿ, ಮಕ್ಕಳ ಸಾಹಿತ್ಯದಲ್ಲಿ ವಿಶೇಷ ಒಲವು ಇರುವ ಮಂಡಲಗಿರಿ ಪ್ರಸನ್ನ 1963 ರ ಅಕ್ಟೋಬರ್‌ 18 ರಂದು ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ಜನಿಸಿದರು. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದ ಹಿರಿಯ ಅಧಿಕಾರಿಯಾಗಿ 30 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿದ್ದಾರೆ. ‘ಕನಸು ಅರಳುವ ಆಸೆ (2000), ಅಮ್ಮ ರೆಕ್ಕೆ ಹಚ್ಚು (2003), ನಿನ್ನಂತಾಗಬೇಕು ಬುದ್ಧ (2016) - ಕವನ ಸಂಕಲನ. ‘ಏಳು ಮಕ್ಕಳ ನಾಟಕಗಳು’ (2016) - ಮಕ್ಕಳ ನಾಟಕಗಳು. ಪದರಗಲ್ಲು, ಕವಿರಾಜ - ಸ್ಮರಣೆ ಸಂಚಿಕೆ ಸಂಪಾದಿತ ಕೃತಿಗಳು. ಕನ್ನಡದ ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸಿದ್ಧಾರೆ. ಅವರ ...

READ MORE

Related Books