ಅವಳು ನಡೆದಂತೆ

Author : ಶೂದ್ರ ಶ್ರೀನಿವಾಸ್

Pages 80

₹ 60.00




Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಶೂದ್ರ ಶ್ರೀನಿವಾಸ್ ಅವರ ‘ಅವಳು ನಡೆದಂತೆ' ಕೃತಿಯು ಗಜಲ್‌ಗಳ ಸಂಕಲನ. ಈ ಗಜಲ್‌ಗಳಲ್ಲಿ ಸಂಕೀರ್ಣವಾದ ಸೌಂದರ್ಯದ ವರ್ಣನೆ, ಭಾವನೆಗಳ ವಿಶ್ಲೇಷಣೆ, ಮಾನವ ಸಂಬಂಧಗಳ ಸ್ವರೂಪ ನಿಸರ್ಗದ ವ್ಯಾಪಾರಗಳನ್ನು ಸಂಕೀರ್ಣವಾದ ಕಾವ್ಯಾತ್ಮಕ ಭಾಷೆಯಲ್ಲಿ ಮುತ್ತಿನ ಮಣಿಗಳನ್ನು ಪೋಣಿಸಿ ಹಾರ ಸಿದ್ಧಗೊಳಿಸುವಂತೆ ಬರೆದಿದ್ದಾರೆ. ಇಲ್ಲಿ ಮಾನವ ತನ್ನ ಬದುಕಿನ ಸಂಕಷ್ಟಗಳನ್ನು ಹೇಗೆ ಎದುರಿಸಬೇಕು, ಸಹಿಸಬೇಕು ಎಂಬ ಬಗೆಗೆ ಮಾರ್ಗದರ್ಶಕ ವಾಗುವ ತಾತ್ವಿಕ ವಿಚಾರಗಳಿವೆ.

About the Author

ಶೂದ್ರ ಶ್ರೀನಿವಾಸ್

ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು  ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...

READ MORE

Related Books