ಆದಿಕದಂಬರು ಗಂಗರು ಮತ್ತು ಬಾದಾಮಿ ಚಾಲುಕ್ಯರು

Author : ವಿರೂಪಾಕ್ಷಿ ಪೂಜಾರಹಳ್ಳಿ

₹ 200.00




Year of Publication: 2021
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ (ಜಿ: ವಿಜಯನಗರ)

Synopsys

‘ಆದಿಕದಂಬರು ಗಂಗರು ಮತ್ತು ಬಾದಾಮಿ ಚಾಲುಕ್ಯರು’ ಕೃತಿಯು ಅಧ್ಯಯನ ಗ್ರಂಥವಾಗಿದೆ. ಪ್ರಾಚೀನ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಒಳಗೊಂಡಿದೆ ಪ್ರಸ್ತುತ ಕೃತಿ. ಕರ್ನಾಟಕದ್ದೇ ಆದ ಮೂಲ ಚರಿತ್ರೆಯನ್ನು ಸಾಂಸ್ಥಿಕವಾಗಿಸುವಲ್ಲಿ ಈ ಮೂರು ರಾಜವಂಶಗಳು ಪ್ರಾರಂಭದ ದೆಸೆಯಲ್ಲಿ ಪಟ್ಟ ಶ್ರಮ ಅಗಣಿತ. ಆದಿಕದಂಬರು ಕನ್ನಡ ನಾಡಿನ ಮೊತ್ತ ಮೊದಲ ರಾಜವಂಶವಾಗಿ ತನ್ನ ಅಸ್ತಿತ್ವವನ್ನು ನಿರ್ಮಿಸುವಲ್ಲಿ ವಹಿಸುವ ಪಾತ್ರ ಕುರಿತು ದಾಖಲೆಗಳು ಹೇಳುತ್ತವೆ. ಗಂಗರು ಸಹ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ರೂಪಿಸುವಲ್ಲಿ ಅಮೋಘ ಪಾತ್ರ ವಹಿಸುತ್ತಾರೆ. ಇವರ ಕಾಲದ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪ ವಿಶೇಷಯುತವಾದುದು. ಬಾದಾಮಿ ಚಾಲುಕ್ಯರು ರಾಜಕೀಯ, ಆಡಳಿತಾತ್ಮಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚರಿತ್ರೆಯನ್ನು ನಿರ್ಮಾಣ ಮಾಡಿದರು. ಪ್ರಸ್ತುತ ಕೃತಿಯಲ್ಲಿ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಈ ಮೂರು ರಾಜವಂಶಗಳ ಚರಿತ್ರೆಯನ್ನು ಸಾಂಸ್ಕೃತಿಕ ದೃಷ್ಟಿಯಿಂದ ಅಧ್ಯಯನ ಮಾಡಿದ್ದಾರೆ.

 

About the Author

ವಿರೂಪಾಕ್ಷಿ ಪೂಜಾರಹಳ್ಳಿ
(17 August 1970)

.ಲೇಖಕ ವಿರೂಪಾಕ್ಷಿ ಪೂಜಾರಹಳ್ಳಿ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರು. ಎಂ.ಎ, ಎಂ.ಫಲ್, ಪಿಎಚ್ ಡಿ ಪದವೀಧರರು. ಕರ್ನಾಟಕ ಮಧ್ಯಕಾಲೀನ ಸಾಂಸ್ಕೃತಿಕ ಚರಿತ್ರೆ ವಿಷಯದಲ್ಲಿ ಪರಿಣಿತಿ ಹೊಂದಿದ್ದಾರೆ.  ಕೃತಿಗಳು: ಬಳ್ಳಾರಿ ಜಿಲ್ಲೆಯ ಪಾಳೆಗಾರರು, ವಿಜಯನಗರ ಕಾಲದ ಸಂಸ್ಕೃತಿ, ಮಹರ್ಷಿ ವಾಲ್ಮೀಕಿಯ ಲೋಕದೃಷ್ಟಿ ಮತ್ತು ವಿಚಾರಧಾರೆ, ಬ್ರಿಟಿಷರ ವಿರುದ್ಧ ಬೇಡ ನಾಯಕರ ಹೋರಾಟಗಳು, ಕೃಷ್ಣ ದೇವರಾಯನ ತೀರ್ಥಯಾತ್ರೆಗಳು ಹಾಗೂ ಚಿನ್ನಹಗರಿ ಪರಿಸರದ ಪ್ರಾಚ್ಯಾವಶೇಷಗಳು, ಪೆರಿಯಾರ್‍ ಮತ್ತು ದ್ರಾವಿಡ ಚಳವಳಿ ಸೇರಿದಂತೆ 200ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.  ಪ್ರಶಸ್ತಿ: ಹರತಿ ವೀರನಾಯಕ ಪ್ರಶಸ್ತಿ (2012), ವಾಲ್ಮೀಕಿ ಪ್ರಶಸ್ತಿ ...

READ MORE

Related Books