ಎಡದೊರೆ: ರಾಯಚೂರು ಜಿಲ್ಲಾ ದರ್ಶನ

Author : ಬಸವಪ್ರಭು ಪಾಟೀಲ

Pages 288

₹ 200.00




Year of Publication: 2016
Published by: ಸ್ವಾಗತ ಸಮಿತಿ
Address: , ರಾಯಚೂರು

Synopsys

‘ಎಡದೊರೆ: ರಾಯಚೂರು ಜಿಲ್ಲಾ ದರ್ಶನ’ ಕೃತಿಯ ಪ್ರಧಾನ ಸಂಪಾದಕರು ಬಸವಪ್ರಭು ಪಾಟೀಲ, ಬೆಟ್ಟದೂರು, ಭೀಮನಗೌಡ ಇಟಗಿ ಮತ್ತು ದಸ್ತಗೀರ್ ಸಾಬ್ ದಿನ್ನಿ ಹಾಗೂ ಜೆ.ಎಲ್. ಈರಣ್ಣ ಸಂಪಾದಕರು. ರಾಯಚೂರು ಜಿಲ್ಲೆಯನ್ನು ಎಡದೊರೆ ಎಂದು ಕರೆಯಲಾಗುತ್ತದೆ. ಈ ಜಿಲ್ಲಾ ವ್ಯಪ್ತಿಯ ಎಲ್ಲ ಐತಿಹಾಸಿಕ-ಸಾಂಸ್ಕೃತಿಕ ಸ್ಮಾರಕ, ತಾಣಗಳನ್ನು ಪರಿಚಯಿಸಲಾಗಿದೆ. ದಾಸ ಸಾಹಿತ್ಯ ಸೇರಿದಂತೆ ಸಾಹಿತ್ಯ ಇತರ ಪ್ರಕಾರಗಳಲ್ಲಿ ಈ ಜಿಲ್ಲೆ ನೀಡಿರುವ ಕೊಡುಗೆಗಳನ್ನು ಇಲ್ಲಿ ಸ್ಮರಿಸಿಕೊಡಲಾಗಿದೆ.

About the Author

ಬಸವಪ್ರಭು ಪಾಟೀಲ

ಡಾ. ಬಸವಪ್ರಭು ಪಾಟೀಲರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಸಾಹಿತಿಗಳು, ಶರಣ ಜೀವನವನ್ನು ಅಳವಡಿಸಿಕೊಂಡವರು. ಬೆಟ್ಟದೂರದಂತಹ ಊರಲ್ಲಿ ಹುಟ್ಟಿ ಮನೆಯ ಕಲೆ-ಸಾಹಿತ್ಯ-ಸಂಸ್ಕೃತಿ ಸಂಗಮದ ಪರಿಸರದಲ್ಲಿ ಬೆಳೆದವರು. ಎಂ.ಬಿ. ಬಿ.ಎಸ್, ಎಫ್, ಸಿ. ಜಿ. ಪಿ., ಡಿ.ಎಫ್. ಎಚ್. ಪದವಿಯನ್ನು ವೈದ್ಯಕೀಯದಲ್ಲಿ ಪಡೆದರು. ರಾಯಚೂರು ಜಿಲ್ಲೆಯ ಮಾನವಿಯಲ್ಲಿ ಕಲ್ಯಾಣ ವೈದ್ಯಾಲಯ ಸ್ಥಾಪಿಸಿ ವೈದ್ಯರಾಗಿ ಜನಪರ ಸೇವೆ ಸಲ್ಲಿಸಿದ್ದಾರೆ. ಇವರು ಕವಿಯಾಗಿ, ವೈಚಾರಿಕ ಸಾಹಿತಿಯಾಗಿದ್ದರಿಂದ ಮಾತನಾಡಿ ಹೆಣಗಳೇ, ಕವನ ಸಂಕಲನ, ಇದೇನು ಕತೆ, ವಿಚಾರ ಲೇಖನಗಳ ಸಂಗ್ರಹ ಹಾಗೂ ನವ ಸಾಕ್ಷರಿಗಾಗಿ ಪ್ರಥಮ ಚಿಕಿತ್ಸೆ ಕೃತಿ ಪ್ರಕಟಿಸಿದ್ದಾರೆ. ಪ್ರಪಂಚ, ವಿಶ್ವಕಲ್ಯಾಣ, ಸಂಕ್ರಮಣ, ...

READ MORE

Related Books