ಮಂಗಳೂರಿನ ರಾಮಕೃಷ್ಣ ಮಠ- ರಾಮಕೃಷ್ಣ ಮಿಷನ್

Author : ಶ್ರೀನಿವಾಸ ದೇಶಪಾಂಡೆ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರದ ಕನ್ನಡ ಸಂಘದ 'ನಾಡಿಗೆ ನಮಸ್ಕಾರ' ಮಾಲಿಕೆಯಲ್ಲಿ ಪ್ರಕಟವಾಗುತ್ತಿರುವ ಈ ಕೃತಿ ಮಂಗಳೂರಿನ ರಾಮಕೃಷ್ಣ ಮಠವನ್ನು ಪರಿಚಯಿಸುವ ಮೊದಲ ಕೃತಿ ಎನ್ನಬಹುದು. ಮಂಗಳೂರಿನ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳ ಜೊತೆಗೆ ಅದರ ಅಸ್ತಿತ್ವದ ಇತಿಹಾಸವನ್ನೂ ಸಾರ್ವಜನಿಕ ಕೈಂಕರ್ಯದಲ್ಲಿ ಮಠ ತೊಡಗಿಸಿಕೊಂಡ ಬಗೆಯನ್ನು ಲೇಖಕರು ದಾಖಲಿಸುತ್ತಾರೆ. ಕಳೆದ ಎರಡು ವರ್ಷಗಳಲ್ಲಿ ಮಂಗಳೂರು ನಗರದಲ್ಲಿ ಮಠವು ಸಮರೋಪಾದಿಯಲ್ಲಿ ನಡೆಸಿದ ಸ್ವಚ್ಛತಾ ಆಂದೋಲನದ ವಿವರವಾದ ಚಿತ್ರಣ, ರಾಮಕೃಷ್ಣ ಮಠದ ಕೇಂದ್ರಸ್ಥಾನವಾದ ಕೋಲಕತ್ತೆಯ ಕೇಂದ್ರ ಮಠದ ಉಗಮ ಮತ್ತು ಬೆಳವಣಿಗೆ, ಮಠದ ಉದ್ದೇಶ ಆಧ್ಯಾತ್ಮಿಕ ಸಂದೇಶಗಳನ್ನು ತಂದಿರುವ ಕಾರಣ ರಾಮಕೃಷ್ಣ ಮಠದ ಅರ್ಥವ್ಯಾಪಿ ಹಿಗ್ಗಿದೆ. ದೇಶಪಾಂಡೆಯವರು ಪ್ರೀತಿ ಮತ್ತು ಗೌರವ ಗಳೊಂದಿಗೆ ವಿಷಯ ಮಂಡನೆ ಮಾಡುತ್ತಾರೆ. ಈ ಕಾರಣದಿಂದಾಗಿ ಅವರ ಭಾಷೆಯಲ್ಲೂ ವಿಷಯದಷ್ಟೇ ಉದಾರತೆ ಮೇಲೈಸಿದೆ. ಮಂಗಳೂರು ನಗರದ ಆಶ್ರಮವೊಂದರ ಐತಿಹಾಸಿಕ ದಾಖಲೆಯಾಗಿ ಕೃತಿ ಮುಖ್ಯವಾಗುತ್ತದೆ. 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ’ಯ 201ನೇ ಪುಸ್ತಕ.

About the Author

ಶ್ರೀನಿವಾಸ ದೇಶಪಾಂಡೆ

ರಾಯಚೂರು ಜಿಲ್ಲೆಯ ಮುದಗಲ್ಲಿನಲ್ಲಿ ಜನಿಸಿದ ಶ್ರೀನಿವಾಸ ದೇಶಪಾಂಡೆ ಅವರು ಅಲ್ಲಿಯೇ ಸಿವಿಲ್‌ನಲ್ಲಿ ಇಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿದರು. ಮುಂದೆ ಸ್ಥಿರಾಸ್ತಿ ಮೌಲ್ಯಮಾಪನದಲ್ಲಿ ಎಂ.ಎಸ್ಸಿ ಪದವಿಗಳಿಸಿ ಕರ್ಣಾಟಕ ಬ್ಯಾಂಕಿನ ಉದ್ಯೋಗಕ್ಕೆ ಅಂಟಿಕೊಂಡು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ದೇಶಪಾಂಡೆಯವರಿಗೆ ಸಾಹಿತ್ಯದ ಮೇಲಿನ ಒಲವು, ಕೈಂಕರ್ಯ ಹವ್ಯಾಸವೆಂಬಂತೆ ಪ್ರಾರಂಭವಾಗಿ ಓದು, ವಿಶ್ಲೇಷಣೆ, ಬರಹಗಳಿಗೆ ಬಂದು ನಿಂತಿರುವುದು ಅವರ ವ್ಯಕ್ತಿತ್ವದ ಸೋಜಿಗಗಳಲ್ಲೊಂದು. ಬಿಡುವು ಅಪರೂಪವಾದ ಬ್ಯಾಂಕಿನ ಕೆಲಸದ ನಡುವೆ ದೇಶವಿದೇಶಗಳ ಪ್ರವಾಸ ಮಾಡುತ್ತಾರೆ.  ಅವರು ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸೂರ್ಯನಾರಾಯಣ ಅಡಿಗರನ್ನು ಕುರಿತು ಪುಸ್ತಕ ಪ್ರಕಟಿಸಿದ್ದಾರೆ. ಹಾಗೆಯೇ ಅವರು ಬರೆದ ...

READ MORE

Related Books