
ಮಧ್ಯಯುಗೀನ ದಕ್ಷಿಣ ಭಾರತದ ಚರಿತ್ರೆಯಲ್ಲಿ ವಿಜಾಪುರದ ಆದಿಲಶಾಹಿಗಳ ಪಾತ್ರ ಪ್ರಮುಖ. ಆದಿಲ್ಶಾಹಿಗಳ ಮೂಲ ಆಕರಗಳು ಕನ್ನಡದಲ್ಲಿ ಸಾಕಷ್ಟು ದೊರಕದೇ ಇರುವುದು ಮತ್ತು ಪರ್ಶಿಯನ್, ದಖಣಿ ಭಾಷೆಗಳಲ್ಲಿವೆ. ಅವುಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಮುಖ ಕೆಲಸವನ್ನು ಡಾ. ಎಂ.ಎಂ. ಕಲಬುರ್ಗಿ ಅವರ ನೇತೃತ್ವವದಲ್ಲಿ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರವು ಕೈಗೆತ್ತಿಕೊಂಡಿತ್ತು. ಕೃಷ್ಣ ಕೋಲ್ಹಾರ ಕುಲಕರ್ಣಿ ಅವರ ಸಂಪಾದಕತ್ವದಲ್ಲಿ ಆದಿಲ ಶಾಹಿ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಲಾಗಿದೆ. ಈ ಸರಣಿಯ ಆರನೇ ಸಂಪುಟವಿದು. ಈ ಸಂಪುಟದಲ್ಲಿ ಇಬ್ರಾಹೀಮ್ನಾಮಾ, ಗುಲದಸ್ತಾಯೆ ಬಿಜಾಪುರ, ತಾರೀಖೆ ಹಪ್ತಕುರ್ಸಿ, ಫುತೂಹತೆ-ಇ-ಆಲಂಗೀರ್ ಕೃತಿಗಳ ಕನ್ನಡ ಅನುವಾದಗಳಿವೆ. ಈ ಪುಸ್ತಕಗಳನ್ನು ಮುಹಮ್ಮದ್ ಸಿಬ್ಘತ್ ಉಲ್ಲಾಹ್, ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಮೌಲಾನಾ ಮಹಬೂಬುಲ್ ರಹಮಾನ ಮದನಿ ಮತ್ತು ಡಾ. ಆರ್.ಕೆ. ಕುಲಕರ್ಣಿ ಅವರು ಅನುವಾದಿಸಿದ್ದಾರೆ.
©2025 Book Brahma Private Limited.