ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು

Author : ಆಗುಂಬೆ ಎಸ್. ನಟರಾಜ್‌

Pages 114

₹ 50.00




Year of Publication: 2009
Published by: ಹಂಸ ಪ್ರಕಾಶನ
Address: 947, 3ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು- 560104
Phone: 9449101086

Synopsys

‘ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಕೃತಿ. ಈ ಕೃತಿ ಕನ್ನಡಿಗರ ಸಾಹಸಗಾಥೆಯನ್ನು ಕಣ್ಣ ಮುಂದಿಡುತ್ತದೆ. ನೂರಾರು ವರ್ಷಗಳ ಕೆಳಗೆ ದೂರದ ಬಂಗಾಳದಲ್ಲಿ, ಬಿಹಾರದಲ್ಲಿ, ಅಷ್ಟು ದೂರವಿರದ ತಮಿಳುನಾಡಿನಲ್ಲಿ ಕನ್ನಡಿಗರು ರಾಜ್ಯಗಳನ್ನು ಸ್ಥಾಪಿಸಿ ಆಳಿದರು ಎನ್ನುವುದು ರೋಮಾಂಚನಗೊಳಿಸುವ ಸಂಗತಿ. ಈ ರಾಜರಲ್ಲಿ ಹಲವಾರು ಸಮರ್ಥ ಆಡಳಿತಗಾರರೂ, ಕಲಾ ಪ್ರೇಮಿಗಳೂ ಆಗಿದ್ದರು. ಶ್ರೀ ರಂಗನಾಥಸ್ವಾಮಿ ಗುಡಿಯಲ್ಲಿ ಒಂದು ಸುಂದರ ಮತ್ತು ಚಿಕ್ಕದಾದ ಹೊಯ್ಸಳ ದೇವಸ್ಥಾನವಿದೆ. ಇಂತಹ ಹಲವು ಕುತೂಹಲಕರ ಸಂಗತಿಗಳು ಈ ಕೃತಿಯಲ್ಲಿವೆ.

About the Author

ಆಗುಂಬೆ ಎಸ್. ನಟರಾಜ್‌
(20 November 1939)

ಲೇಖಕ ನಟರಾಜ್, 1939 ನವೆಂಬರ್‌ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...

READ MORE

Related Books