ಅಮರ ಸುಳ್ಯದ ರೈತ ಹೋರಾಟ (1834-1837)

Author : ಪುರುಷೋತ್ತಮ ಬಿಳಿಮಲೆ

Pages 116

₹ 110.00




Year of Publication: 2021
Published by: ಅಹರ್ನಿಶಿ  ಪ್ರಕಾಶನ
Address: ಜ್ಞಾನವಿಹಾರ, ಬಡಾವಣೆ, ಕಂಟ್ರಿಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ- 577203
Phone: 9449174662

Synopsys

‘ಅಮರ ಸುಳ್ಯದ ರೈತ ಹೋರಾಟ (1834-1837)’ ಡಾ. ಪುರುಷೋತ್ತಮ ಬಿಳಿಮಲೆ ಅವರ ಕೃತಿ. ಈ ಕೃತಿಗೆ ಪ್ರೊ.ಅಶೋಕ ಶೆಟ್ಟರ್ ಮುನ್ನುಡಿ ಬರೆದು ‘ದೇಶದ ರಾಜಧಾನಿಯಲ್ಲಿ ಕೇಂದ್ರ ಸರಕಾರ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ಮೂರು ತಿಂಗಳುಗಳಿಂದ ದೆಹಲಿ ಗಡಿಗಳಲ್ಲಿ ಲಕ್ಷಾಂತರ ರೈತರು ಬೀಡುಬಿಟ್ಟು ಹೋರಾಡುತ್ತಿರುವ ಸಂದರ್ಭದಲ್ಲಿ ಇದಕ್ಕಿಂತ ಸುಮಾರು ಎರಡು ಶತಮಾನ ಮೊದಲು ನಡೆದ, ಅಮರ ಸುಳ್ಯದ ರೈತ ಹೋರಾಟವೆಂದು ಪರಿಚಿತವಾದ, ಟಿಪ್ಪು ಪತನಾನಂತರ ತಮ್ಮ ಅಧಿಕಾರ ವ್ಯಾಪ್ತಿಯಡಿ ಬಂದ ದಕ್ಷಿಣ ಕನ್ನಡ ಮತ್ತು ಕೊಡಗು ಪ್ರದೇಶಗಳಲ್ಲಿ ಬ್ರಿಟೀಷರು ಭೂಸ್ವಾಮ್ಯ ಮತ್ತು ಭೂಕಂದಾಯಕ್ಕೆ ಸಂಬಂಧಿಸಿ ಜಾರಿಗೆ ತಂದ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸಿದ ಹೋರಾಟವನ್ನು ಕುರಿತ ಡಾ. ಪುರುಷೋತ್ತಮ ಬಿಳಿಮಲೆಯವರ ಈ ಪುಸ್ತಕ ಪ್ರಕಟವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕೃತಿಯಲ್ಲಿ ಮೊದಲಿಗೆ ಪ್ರವೇಶದೊಂದಿಗೆ ಪ್ರಾಂತೀಯ ಹೋರಾಟಗಳು, ಮಾಹಿತಿ ಸಂಗ್ರಹ, ಸುಳ್ಯ ಮತ್ತು ಕೊಡಗು ಪರಿಸರದ ರೈತ ಸಮುದಾಯಗಳು, ರೈತ ಹೋರಾಟದ ಸಹಭಾಗಿಗಳು, ರೈತರ ಅಸಮಾಧಾನದ ಕಾರಣಗಳು, ಹೋರಾಟದ ಮುಖ್ಯ ಘಟ್ಟಗಳು ಮತ್ತು ಅವುಗಳ ವಿವರಗಳು, ವಿಫಲಗೊಂಡ ಹೋರಾಟ, ದೈವೀಕರಣ ಮತ್ತು ನಕಲೀಕರಣ ಪ್ರಕ್ರಿಯೆಗಳು ಹಾಗೂ ಸಮಾರೋಪ ಎಂಬ 10 ಅಧ್ಯಾಯಗಳಿವೆ.

About the Author

ಪುರುಷೋತ್ತಮ ಬಿಳಿಮಲೆ
(21 August 1955)

ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್‌ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ...

READ MORE

Related Books