
ಮಧ್ಯಯುಗೀನ ದಕ್ಷಿಣ ಭಾರತದ ಚರಿತ್ರೆಯಲ್ಲಿ ವಿಜಾಪುರದ ಆದಿಲಶಾಹಿಗಳ ಪಾತ್ರ ಪ್ರಮುಖ. ಆದಿಲ್ಶಾಹಿಗಳ ಮೂಲ ಆಕರಗಳು ಕನ್ನಡದಲ್ಲಿ ಸಾಕಷ್ಟು ದೊರಕದೇ ಇರುವುದು ಮತ್ತು ಪರ್ಶಿಯನ್, ದಖಣಿ ಭಾಷೆಗಳಲ್ಲಿವೆ. ಅವುಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಮುಖ ಕೆಲಸವನ್ನು ಡಾ. ಎಂ.ಎಂ. ಕಲಬುರ್ಗಿ ಅವರ ನೇತೃತ್ವವದಲ್ಲಿ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರವು ಕೈಗೆತ್ತಿಕೊಂಡಿತ್ತು. ಕೃಷ್ಣ ಕೋಲ್ಹಾರ ಕುಲಕರ್ಣಿ ಅವರ ಸಂಪಾದಕತ್ವದಲ್ಲಿ ಆದಿಲ ಶಾಹಿ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಲಾಗಿದೆ. ಈ ಸರಣಿಯ ಮೊದಲ ಪುಸ್ತಕ ತಾರೀಖ-ಎ- ಫರಿಶ್ತಾ- ಭಾಗ-4. ಮುಹಮ್ಮದ್ ಕಾಸೀಮ ಫರಿಶ್ತಾ ರಚಿಸಿದ ’ಗುಲ್ಶನ್ ಎ ಇಬ್ರಾಹಿಂ’ ಎಂದೂ ಕರೆಯಲಾಗುತ್ತಿದ್ದ ಕೃತಿಯು ಮೊದಲ ಬಾರಿಗೆ ಕನ್ನಡಕ್ಕೆ ಅನುವಾದವಾಗಿದೆ. ಈ ಸಂಪುಟದ ಅನುವಾದವನ್ನು ಅಬ್ದುಲ್ ಹಮೀದ್ ಮತ್ತು ರಘೋತ್ತಮರಾವ ದೇಸಾಯಿ ಅವರು ಮಾಡಿದ್ದಾರೆ.
©2025 Book Brahma Private Limited.