ಭೀಮನ ಮದುವೆ

Author : ಸಿ.ಎಂ.ಗೋವಿಂದರೆಡ್ಡಿ

Pages 140

₹ 170.00




Year of Publication: 2017
Published by: ಅಕ್ಷರ ಮಂದಿರ
Address: .277/3, 5th ಕ್ರಾಸ್, ವಿಧಾನಸೌಧ ಎಕ್ಸ್‌ ಟೆನ್ಷನ್, ಲಗ್ಗೆರೆ, ಬೆಂಗಳೂರು 560058
Phone: 9481908555

Synopsys

ನರಿ ಮತ್ತು ಮೇಕೆ ಒಮ್ಮೆ ನರಿಯು ಊರ ಕಡೆಗೆ ಬೇಟೆಗೆಂದು ಬಂದಿತು ಊರ ಬಳಿಯಿಲಿದ್ದ ಪುಟ್ಟ ಬಾವಿಯೊಳಗೆ ಬಿದ್ದಿತು ಹತ್ತು ಅಡಿಯ ಆಳವಿದ್ದ ಪುಟ್ಟ ಬಾವಿಯೊಳಗಡೆ ಇತ್ತು ಸ್ವಲ್ಪ ಮಾತ್ರ ನೀರು ಮುಳುಗಲಿಲ್ಲ ತಳದೆಡೆ ಬಾವಿಯಿಂದ ಮೇಲೆ ಬರಲು ಇರಲೇ ಇಲ್ಲ ಮೆಟ್ಟಿಲು ಎಷ್ಟೇ ಯತ್ನ ಪಟ್ಟರೂನು ಆಗಲಿಲ್ಲ ಹತ್ತಲು ಅಷ್ಟರಲ್ಲಿ ಬಾವಿ ಬಳಿಗೆ ಮೇಕೆಯೊಂದು ಬಂದಿತು “ಅಯ್ಯಾ ನರಿಯೆ ಬಾವಿಯಲ್ಲಿ ಏಕೆ ಬಿದ್ದೆ ?” ಎಂದಿತು ಮೇಕೆ ಮಾತು ಕೇಳಿ ನರಿಯು ಮನದಿ ಬಹಳ ನಾಚಿತು ಆದರೂನು ತೋರಗೊಡದೆ ನಗುತ ಹೀಗೆ ನುಡಿಯಿತು- “ಗೆಳೆಯ ನಾನು ಬೀಳಲಿಲ್ಲ ಜಳಕ ಮಾಡುತಿರುವೆನು ಆಹಾ! ಎಂಥ ಸುಖವು ಇಲ್ಲಿ ನೀನೂ ಬರುವೆಯೇನು? ನರಿಯ ಮಾತು ಕೇಳಿ ಮೇಕೆ ಬಾವಿಯೊಳಗೆ ಜಿಗಿಯಿತು ಮೇಕೆ ಬೆನ್ನ ಮೇಲೆ ಹತ್ತಿ ನರಿಯು ಹೊರಗೆ ನೆಗೆಯಿತು! (ಕೃತಿಯೊಳಗಿಂ

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Related Books