ಚೆಂಬೇಶನೊಂದಿಗೆ ಸಂದರ್ಶನ

Author : ಸೂರಿ ಹಾರ್ದಳ್ಳಿ

₹ 125.00




Year of Publication: 2016
Published by: ಅಕ್ಷಯ ಪ್ರಕಾಶನ
Address: ಬೆಂಗಳೂರು

Synopsys

ಸೂರಿ ಹಾರ್ದಳ್ಳಿ ಅವರ ಹಾಸ್ಯ ಪ್ರಬಂಧ ಚೆಂಬೇಶನೊಂದಿಗೆ ಸಂದರ್ಶನ. ಈ ಹಾಸ್ಯ ಪ್ರಬಂಧ ಪುಸ್ತಕದಲ್ಲಿ 24 ರಸವತ್ತಾದ ಪ್ರಬಂಧಗಳಿವೆ. ಕೇಶ ಮತ್ತು ನಯನ, ವೃತ್ತಿ ನಿವೃತ್ತಿ, ಚೆಂಬೇಶ್ವರ ಸಂದರ್ಶನ, ಕಾವೇರಿ ಸಮಸ್ಯೆಗೆ ಸುಲಭ ಪರಿಹಾರ, ಏನಕೇನ ಪ್ರಕಾರೇಣ ಸೇರಿದಂತೆ ಅನೇಕ ಶೀರ್ಷಿಕೆಗಳ ಬರಹಗಳಿವೆ.

About the Author

ಸೂರಿ ಹಾರ್ದಳ್ಳಿ
(30 January 1955)

ಲೇಖಕ ಸೂರಿ ಹಾರ್ದಳ್ಳಿ ಅವರು ಮೂಲತಃ ಕುಂದಾಪುರ ತಾಲ್ಲೂಕಿನ ಹಾರ್ದಳ್ಳಿಯವರು. ತಂದೆ- ಕೃಷ್ಣದೇವ ಕೆದಿಲಾಯ, ತಾಯಿ- ಶಾರದಮ್ಮ. ಪ್ರಾಥಮಿಕ ಶಿಕ್ಷಣವನ್ನು ಹಾರ್ದಳ್ಳಿಯಲ್ಲಿ, ಹೈಸ್ಕೂಲನ್ನು ಬಿದಕಲ್ ಕಟ್ಟೆ ಮತ್ತು ಪಿ.ಯು.ಸಿ ಯನ್ನು ಶಂಕರ ನಾರಾಯಣ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿಗೆ ಬಂದ ಸೂರಿ ಅವರು ವಸತಿಗೃಹವೊಂದರಲ್ಲಿ ಮಾಣಿಯಾಗಿ ಸೇರಿ, ಅಲ್ಲಿಯ ಮಾಲೀಕರ ಪ್ರೋತ್ಸಾಹದೊಂದಿಗೆ  ಕಲಿಕೆ ಮುಂದುವರಿಸಿದರು. ಬಿ.ಎ. ಪದವೀಧರರಾದರು-ಬಾಹ್ಯ ವಿದ್ಯಾರ್ಥಿಯಾಗಿ.   ಬಿಸ್ಕತ್ ಕಾರ್ಖಾನೆ ಸೇರಿದಂತೆ ರಾಯಚೂರಿನ ರಾಯಚೂರು ವಾಣಿಯಲ್ಲಿ ಕೆಲಸಕ್ಕೆ ಸೇರಿದರು ಕೊನೆಗೆ ಮೈಕೋ ಉಪಕಾರಗೃಹದಲ್ಲಿ ಕೆಲಸ ಸಿಕ್ಕಿತು. ಪರೀಕ್ಷೆ, ಸ್ಪರ್ಧೆ ಪ್ರತಿನಿತ್ಯದ ಕ್ರಮವಾಗಿದ್ದು, ಎಲ್ಲರನ್ನೂ ಹಿಂದಿಕ್ಕಿ ಬಡ್ತಿ ಪಡೆದು, ...

READ MORE

Related Books