ಕಾರ್ಡಿದ್ರೆ ಕೈಲಾಸ

Author : ಎಚ್. ಡುಂಡಿರಾಜ್

Pages 160

₹ 120.00




Published by: ಅಂಕಿತ ಪುಸ್ತಕ

Synopsys

ಡುಂಡಿರಾಜ್‍ರವರು ಬರೆದ ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಕಾರ್ಡಿದ್ರೆ ಕೈಲಾಸ. ರಾಜ್ಯದ ಮತ್ತು ದೇಶದ ರಾಜಕೀಯ ವಿಪರ್ಯಾಸಗಳು, ಜನರ ಭಕ್ತಿಯನ್ನು ದುರುಪಯೋಗಪಡಿಸಿಕೊಂಡು ಕೋಟಿಗಟ್ಟಲೆ ಆಸ್ತಿ ಮಾಡುವ ಢೋಂಗಿ ಸನ್ಯಾಸಿಗಳು ಹೀಗೇ ಹಲವು ವಿಷಯಗಳ ಬಗೆಗೆ ಡುಂಡಿರಾಜ್‍ರವರು ಪ್ರಜಾವಾಣಿಯಲ್ಲಿ ಬರೆದ ಹನಿಗವನ ಸೇರಿದ ಲೇಖನಗಳ ಸರಮಾಲೆ ಈ ಪುಸ್ತಕ. ಪುಸ್ತಕದ ಹಿನ್ನುಡಿಯಲ್ಲಿ ಲೇಖಕರಾದ ಡಾ. ಚಿಂತಾಮಣಿ ಕೊಡ್ಲೆಕೆರೆಯವರು ‘ಮಾನವನಾಗಿ ಹುಟ್ಟಿದ ಮೇಲೆ ಜೋಗದ ಗುಂಡಿಯನ್ನು ನೋಡಲೇಬೇಕು, ಹಟ್ಟಿಕುದುರು ಡುಂಡಿಯನ್ನು ಓದಲೇಬೇಕು’ ಎಂದು, ಡುಂಡಿರಾಜ್‍ರವರ ಬರೆವಣಿಗೆಯ ಶೈಲಿಯನ್ನು ಹೊಗಳಿದ್ದಾರೆ. ಸಾಮಾಜಿಕವಾಗಿ ಕಾಣ ಸಿಗುವ ಹಲವು ಸಮಸ್ಯೆ ಹಾಗೂ ನೋವುಗಳನ್ನು ಹಾಸ್ಯಭರಿತ ವ್ಯಂಗ್ಯದ ರೂಪದಲ್ಲಿ ಪ್ರಸ್ತುತ ಪಡಿಸುವ ಡುಂಡಿರಾಜ್‍ರವರ ಸಾಂಪ್ರದಾಯಿಕ ಶೈಲಿ ಈ ಪುಸ್ತಕದಲ್ಲಿ ಕೂಡ ಕಾಣಬಹುದು. ಬದುಕಿನ ಬಗ್ಗೆ, ರಾಜಕೀಯದ ಬಗ್ಗೆ ಎಲ್ಲೋ ಕಿಂಚಿತ್ತು ಆಶಾಭಾವ ಇಲ್ಲದೆ ಹೋದರೆ ಈ ನೋಟ, ಈ ಹಾಸ್ಯ ಸಾಧ್ಯವಾಗುವುದಿಲ್ಲ. ಅಲ್ಲಲ್ಲಿ ಕಾಣಿಸಿಕೊಳ್ಳುವ ಅಣಕವಾಡುಗಳು ಓದಿನ ರುಚಿ ಹೆಚ್ಚಿಸಿವೆ. ಹನಿಗವನಗಳ ಮೂಲಕ ಓದುಗರನ್ನು ನಗಿಸುವುದಲ್ಲದೇ, ಸಾಮಾಜಿಕ ಕಳಕಳಿಯ ಕುರಿತಾಗಿ ಚಿಂತನೆಯನ್ನು ಮೂಡಿಸುವಲ್ಲಿ, ಡುಂಡಿರಾಜ್‍ರವರ ಕಾರ್ಡಿದ್ರೆ ಕೈಲಾಸ ಪುಸ್ತಕ ಸಫಲವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

About the Author

ಎಚ್. ಡುಂಡಿರಾಜ್
(18 August 1956)

ಎಚ್. ಡುಂಡಿರಾಜ್, ಕನ್ನಡದ ಹೆಸರಾಂತ ಚುಟುಕು ಕಾವ್ಯ ಸಾಹಿತಿ. ಈವರೆಗೆ ಸುಮಾರು 45 ಪುಸ್ತಕಗಳನ್ನು ಬರೆದಿರುವ ಇವರು, ತಮ್ಮ ಪುಸ್ತಕಗಳಲ್ಲಿ ಚುಟುಕು ಸಾಹಿತ್ಯದ ಕುರಿತಾಗಿನ ಎಳೆಗಳನ್ನು ಸೂಕ್ಷ್ಮವಾಗಿ ಬಿಡಿಸಿಟ್ಟಿದ್ದಾರೆ. ಸಾಹಿತ್ಯ ಮತ್ತು ಹಾಸ್ಯದ ಸಮ್ಮಿಲನ ಇವರ ಕೃತಿಗಳ ವಿಶೇಷತೆ.  ಉಡುಪಿ ಜೆಲ್ಲೆಯ ಹಟ್ಟಿಕುದ್ರುವಿನಲ್ಲಿ 18 ಆಗಸ್ಟ್ 1956ರಲ್ಲಿ ಜನಿಸಿದ ಇವರು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿದ್ದಾರೆ. ಸದ್ಯಕ್ಕೆ ಮಂಗಳೂರಿನ ಕಾರ್ಪೋರೇಶನ್‍ ಬ್ಯಾಂಕ್‍ನ ಸಹಾಯಕ ಮಹಾ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.  2011ರಲ್ಲಿ ನಡೆದ ಸಂಯುಕ್ತ ಅರಬ್‍ ಸಂಸ್ಥಾನದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು, ...

READ MORE

Related Books