ಓದುಗರೊಡನೆಯ ಹರಟೆಗಳು

Author : ಶ್ರೀನಿವಾಸ ಹಾವನೂರ

Pages 90

₹ 20.00




Year of Publication: 2003
Published by: ಲೋಕಶಿಕ್ಷಣ ಟ್ರಸ್ಟ್ ಗ್ರಂಥಮಾಲೆ
Address: ಬೆಂಗಳೂರು-ಹುಬ್ಬಳ್ಳಿ

Synopsys

ಪಾ.ವೆಂ. ಆಚಾರ್ಯರು ಬರೆದ ಹರಟೆಗಳ ಸಂಕಲನ-ಓದುಗರೊಡನೆಯ ಹರಟೆಗಳು. ಶ್ರೀನಿವಾಸ ಹಾವನೂರು ಸಂಪಾದಿಸಿದ್ದಾರೆ. ಇಲ್ಲಿಯ ಪ್ರತಿ ಹರಟೆಯೂ ಸಾಹಿತ್ಯಕ ಅಂಶ-ಗುಣಲಕ್ಷಣಗಳನ್ನು ಹೊಂದಿವೆ. ಈ ಹರಟೆಗಳು ಮನಸ್ಸಿಗೆ ಮುದ ನೀಡುತ್ತವೆ ಅಷ್ಟೇ ಅಲ್ಲ; ಸಮಾಜದ ಓರೆ-ಕೋರೆಗಳನ್ನು ವ್ಯಂಗ್ಯವಾಗಿ ಕಂಡು, ಅದನ್ನು ತಿದ್ದುಕೊಳ್ಳಲೂ ಸಹ ಸೂಚಿಸುವಷ್ಟು ಸಾಮರ್ಥ್ಯ ಪಡೆದಿವೆ.

ಕನ್ನಡ ಕನ್ನಡ ಇದೆಲ್ಲಾವುಂ ಎನ್ನಡ?, ಪಂಪ ಹಾಗೂ ಪಂಪ್, ಶಬ್ದಚ್ಛಟ ಎಂಬ ರೋಗ, ಶೇಕ್ಸ್ಪೀಯರನನ್ನು ಯಾರು ಬರೆದರು?, ಸಕ್ಕರೆ ಗೀತ, ಇಸು ಸಮೃದ್ಧಿ, ಮಂತ್ರಿಗಳು ಮತ್ತು ಅವರ ವಾಕ್ ಸ್ವಾತಂತ್ಯ್ರ ಹೀಗೆ ಒಟ್ಟು ವಿದ್ವತ್ ಪೂರ್ಣವಾದ ಮನಸ್ಸಿಗೆ ಮುದ ನೀಡುವ 25 ಹರಟೆಗಳು ಇಲ್ಲಿ ಸಂಕಲನಗೊಂಡಿವೆ.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್‌ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...

READ MORE

Related Books