ರಾವಣನಿಗೆ ಸಿಟ್ಟು ಏಕೆ ಬರುತ್ತದೆ?

Author : ಡಿ.ಎನ್‌. ಶ್ರೀನಾಥ್‌

Pages 152

₹ 130.00




Year of Publication: 2016
Published by: ಅಂಕಿತ ಪುಸ್ತಕ
Address: # 53, ಶಾಮಸಿಂಗ್ ಸಂಕೀರ್ಣ, ಗಾಂಧಿಬಜಾರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 0802661 7100

Synopsys

ರಾವಣನಿಗೆ ಸಿಟ್ಟು ಏಕೆ ಬರುತ್ತದೆ? ಎಂಬುದು ಹಿಂದಿ ಮೂಲದ ಪ್ರಸಿದ್ಧ ಲೇಖಕ ವಿಮಲ್ ಕುಮಾರ್ ಅವರ ಕೃತಿಯನ್ನು ಲೇಖಕ ಡಿ.ಎನ್. ಶ್ರೀನಾಥ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ವ್ಯಂಗ್ಯಭರಿತ ಬರಹಗಳ ಸಂಕಲನವಿದು. ಮೇಲ್ನೋಟಕ್ಕೆ ನಗೆ ಬರಹಗಳಂತೆ ಕಂಡು ಬಂದರೂ ಸಾಮಾಜಿಕ ಮೌಢ್ಯವನ್ನು, ಅಜ್ಞಾನದ ನಡೆಯನ್ನು, ಅರ್ಥರಹಿತ ಆಚರಣೆಗಳನ್ನು ವ್ಯಂಗ್ಯವಾಡುತ್ತವೆ. ಈ ಆಂತರಿಕ ಸತ್ವದ ಹಿನ್ನೆಲೆಯಲ್ಲಿ ಈ ಬರಹಗಳು ಬಹು ಚರ್ಚಿತ ವಿಷಯಗಳಾಗಿದ್ದು, ಬದುಕಿನಲ್ಲಿ ಮಾರ್ಗದರ್ಶನ ನೀಡುವಂತೆಯೂ ಇವೆ.

About the Author

ಡಿ.ಎನ್‌. ಶ್ರೀನಾಥ್‌
(03 December 1950)

ಅನುವಾದಕ ಶ್ರೀನಾಥ್‌ ಅವರು ಹುಟ್ಟಿದ್ದು 1950 ಡಿಸೆಂಬರ್‌ 3ರಂದು. ಮೂಲತಃ ಶಿವಮೊಗ್ಗದವರು. ತಂದೆ ಡಿ.ನಾರಾಯಣ ರಾವ್‌, ತಾಯಿ ಗುಂಡಮ್ಮ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ಧಾರವಾಡದ ಮುಕ್ತ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ ನಂತರ ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ನಿವೃತ್ತರಾದರು. ಸಾಹಿತ್ಯದೆಡೆಗಿನ ಒಲವು ಅನುವಾದದತ್ತ ಲೇಖಕರನ್ನು ಸೆಳೆಯಿತು. 18ನೇ ವಯಸ್ಸಿನಲ್ಲಿಯೇ "ಶಿಶಿರ"  ಕೃತಿಯನ್ನು ಅನುವಾದ ಮಾಡಿದರು. ಹಿಂದಿ ಮಾತ್ರವಲ್ಲದೇ ಬಂಗಾಳಿ ಭಾಷೆ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಇವರ ಪ್ರಮುಖ ಅನುವಾದಿತ ಕೃತಿಗಳೆಂದರೆ; ಸೂತ್ರದ ...

READ MORE

Related Books