ಕರ್ಣಾಟಕ ಮಹಾಭಾರತ-ಕರ್ಣ ಪರ್ವ; ಸಂಪುಟ-9

Author : ಎನ್. ಅನಂತ ರಂಗಾಚಾರ್

Pages 316




Year of Publication: 1940
Published by: ಎನ್. ಅನಂತ ರಂಗಾಚಾರ್
Address: ಓರಿಯಂಟಲ್ ಲೈಬ್ರರಿ ಪಬ್ಲಿಕೇಷನ್ಸ್ , ಮೈಸೂರು ವಿ.ವಿ. ಮೈಸೂರು

Synopsys

ಮೈಸೂರು ವಿಶ್ವವಿದ್ಯಾಲಯದ ಓರಿಯೆಂಟಲ್ ಲೈಬ್ರರಿ ಪಬ್ಲಿಕೇಷನ್ಸ್ ಪ್ರಾಚ್ಯಕೋಶಾಗಾರವು ರಚಿಸಿದ ತಜ್ಞರ ಮಂಡಳಿಯ ಪರಿಶೀಲನೆ ಅನ್ವಯ ಕರ್ನಾಟಕದ ಮಹಾಭಾರತದ ವಿವಿಧ ಪರ್ವಗಳ ಸಂಪುಟಗಳನ್ನು ಪ್ರಕಟಿಸಲಾಯಿತು. ಪ್ರಧಾನ ಸಂಪಾದಕರಾಗಿ ಎಂ.ಎಸ್. ಬಸವಲಿಂಗಯ್ಯ ಹಾಗೂ ಸಂಪಾದಕರಾಗಿ ಎನ್. ಅನಂತ ರಂಗಾಚಾರ್ ಇದ್ದು, ಆ ಪೈಕಿ ಪ್ರಸ್ತುತ ಕೃತಿಯು ಕುಮಾರ ವ್ಯಾಸ ವಿರಚಿತ ಕರ್ನಾಟಕ ಮಹಾಭಾರತದ ಕರ್ಣ ಪರ್ವ, ಸಂಪುಟ-9' ಆಗಿದೆ. ಕರ್ಣನ ಸೇನೆ ಅಧಿಪತ್ಯಾಭಿಷೇಕ, ಸಾತ್ಯಕಿಯ ಯುದ್ಧ, ತ್ರಿಪುರ ದಹನದ ಕಥೆ, ಕರ್ಣ-ಶಲ್ಯರ ಒಳಜಗಳ, ಭೀಮನ ಘೋರ ಯುದ್ಧ, ದುಶ್ಯಾಸನನ ವಧೆ, ವೃಷಸೇನನ ಮರಣ, ಕರ್ಣ ಅರ್ಜುನರ ಯುದ್ಧ ರಂಗ ಪ್ರವೇಶ, ಕರ್ಣನ ವಧೆ, ಕರ್ಣನ ಸಾವಿಗಾಗಿ ದುರ್ಯೋಧನನ ಪ್ರಲಾಪ ಇತ್ಯಾದಿ ಅಧ್ಯಾಯಗಳು ಈ ಕೃತಿಯಲ್ಲಿ ಸೇರಿವೆ.

About the Author

ಎನ್. ಅನಂತ ರಂಗಾಚಾರ್ - 28 October 1997)

ಕ್ರಿ.ಶ. 1904 ಜೂನ್ ತಿಂಗಳಲ್ಲಿ , ಎನ್ . ಅನಂತರಂಗಾಚಾರ್, ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಜನಿಸಿದರು. ತಂದೆ ಶ್ರೋತ್ರೀಯ ಬ್ರಾಹ್ಮಣ ನರಸಿಂಹಾಚಾರ್ಯರು. ಆಚಾರ್ಯರೇ ಒಂದೆಡೆ ಹೇಳಿರುವಂತೆ ಇವರೇ ಅವರಿಗೆ ಕಾಯಕ ಮೌಲ್ಯವನ್ನೂ ಕಾಲಪ್ರಜ್ಞೆಯನ್ನು ಕಲ್ಪಿಸಿಕೊಟ್ಟವರು. ನಾಲ್ಕನೇ ವರ್ಷದಿಂದ ಹದಿಮೂರನೇ ವರ್ಷದವರೆಗೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಜೊತೆಯಲ್ಲಿಯೇ ಇರಿಸಿಕೊಂಡು ಆ ಅವಧಿಯಲ್ಲಿ ವೇದ , ಪ್ರಬಂಧ , ಪ್ರಯೋಗ , ಸಂಸ್ಕೃತ  ಕಲಿಸಿದರು .ತಿ. ನರಸೀಪುರದ ಎ.ವಿ. ಸ್ಕೂಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ, ನಂತರ, ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು .ಮೈಸೂರು ...

READ MORE

Related Books