ಮಹಾ ಭಾರತಾಮೃತ ಆದಿ ಪರ್ವ

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 608

₹ 3.00




Year of Publication: 1931
Published by: ಗಳಗನಾಥ ಸುರಸ ಗ್ರಂಥಮಾಲಾ
Address: ಧಾರವಾಡ

Synopsys

ಸಚಿತ್ರ ಮಹಾ ಭಾರತಾಮೃತ ಆದಿಪರ್ವ-ಕೃತಿಯನ್ನು ಗಳಗನಾಥರು (ವೆಂಕಟೇಶ ತಿರಕೋ ಕುಲಕರಣಿ) ರಚಿಸಿದ್ದು, ಮಹಾಭಾರತ ಕಾಲದ ಪೂರ್ವದಿಂದಲೂ ಅಂದರೆ ಕೌರವ-ಪಾಂಡವರ ವಂಶವೃಕ್ಷದ ಚಿತ್ರಣ, ಜನುಮೇಜಯನ ಶಾಪ, ಭೃಗುವಂಶದ ವರ್ಣನೆ, ಆಸಕ್ತಿ ಪರ್ವ, ಗರುಡನಿಗೂ ದೇವತೆಗಳಿಗೂ ಯುದ್ಧ, ಅಂಶಾವರತರಣ ಪರ್ವ, ಯಯಾತಿಯ ಆಖ್ಯಾನ, ವಿಚಿತ್ರವೀರ್ಯನ ವಿವಾಹ, ಗಾಂಧಾರಿ, ಧೃತರಾಷ್ಟ್ರ ವಿವಾಹ, ಕರ್ಣನ ಅಂಗರಾಜ್ಯಾಭಿಷೇಕ, ಹಿಡಿಂಬ ವಧ ಪರ್ವ, ಬಕ ವಧ ಪರ್ವ, ಚೈತ್ರ ರಥ ಪರ್ವ, ದ್ರೌಪದಿಯ ಸ್ವಯಂವರ ಪರ್ವ, ಪಾಂಡವರ ನಾಶಕ್ಕಾಗಿ ದುರ್ಯೋಧನನ ಉಪಾಯ, ಅರ್ಜುನನ ವನವಾಸ ಪರ್ವ, ಸುಭದ್ರಾಹರಣ ಪರ್ವ ಹೀಗೆ ಮಹಾಭಾರತ ಯುದ್ಧವರೆಗೂ ವಿವರವಾಗಿ ಚಿತ್ರಿಸಿದ ಕೃತಿ ಇದು.

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books