ವಚನ ಕುಮಾರವ್ಯಾಸ

Author : ಸು. ರುದ್ರಮೂರ್ತಿ ಶಾಸ್ತ್ರಿ

Pages 764

₹ 750.00




Year of Publication: 2022
Published by: ತನು ಮನು ಪ್ರಕಾಶನ
Address: # 1ನೇ ಅಡ್ಡರಸ್ತೆ, ಎಚ್.ಐ.ಜಿ. ಶ್ರೀರಾಮಪುರ, 2ನೇ ಹಂತ, ಶ್ರೀರಾಮಪುರ, ಮೈಸೂರು-570023

Synopsys

ಹಿರಿಯ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರು ಗದುಗಿನ ಭಾರತದ ಸರಳ ಗದ್ಯ ಕಥನವನ್ನು ರಚಿಸಿದ ಕೃತಿ-ವಚನ ಕುಮಾರವ್ಯಾಸ. ಮಹಾಭಾರತದ ಪ್ರಮುಖ ಭಾಗವಾದ ಭಗವದ್ಗೀತೆಯು ಬದುಕಿನ ಸ್ವರೂಪ-ಸ್ವಭಾವದ ಸಂಪೂರ್ಣ ಚಿತ್ರಣ ನೀಡುತ್ತದೆ. ಈ ಬದುಕನ್ನು ಹೇಗೆ ಸ್ವೀಕರಿಸಬೇಕು. ಹೇಗೆ ಅನುಭವಿಸಬೇಕು, ಬದುಕಿನ ಉದ್ದೇಶವಾದರೂ ಏನು, ಅತ್ಯಂತ ಪ್ರಭಾವಶಾಲಿ ಸಾವಿಗಿಂತ ಬದುಕು ಹೇಗೆ ಭಿನ್ನ, ಬದುಕುವುದೂ ಒಂದು ಕಲೆ ಇಂತಹ ಅಂಶಗಳನ್ನು ಸ್ಪಷ್ಟಪಡಿಸುವ ಮೂಲಕ ಬದುಕಿಗೆ ಅರ್ಥ ತಂದುಕೊಳ್ಳುವ ಪ್ರಕ್ರಿಯೆಯನ್ನು ತಿಳಿಸುತ್ತದೆ. ಅಷ್ಟು ಮಾತ್ರವಲ್ಲ; ಈ ಗ್ರಹಿಕೆ, ಅರಿವು ಅರಿತಷ್ಟು ಆಳವಾಗಿದೆ; ನೋಡಿದಷ್ಟು ಎತ್ತರವಾಗಿ ಕಾಣಿಸುತ್ತದೆ. ನೋವು, ಹತಾಶೆ, ನಿರಾಸೆಯೊಂದಿಗೆ ಬದುಕಿನ ಪ್ರೀತಿಯ ಅಗತ್ಯವನ್ನೂ ತಿಳಿಸುತ್ತದೆ. ಇಂತಹ ಅರ್ಥಗಳನ್ನು ಒಳಗೊಂಡ ಗದುಗಿನ ಕುಮಾರವ್ಯಾಸ ಭಾರತವನ್ನು ಸರಳವಾಗಿ ನೀಡಿದ ಹೆಚ್ಚುಗಾರಿಕೆ ಈ ಕೃತಿಯದ್ದು.

About the Author

ಸು. ರುದ್ರಮೂರ್ತಿ ಶಾಸ್ತ್ರಿ
(11 November 1948)

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...

READ MORE

Related Books