ಬಾಲಕಾಂಡವು

Author : ಸಾಲಿ ರಾಮಚಂದ್ರರಾಯ

Pages 115




Year of Publication: 1934
Published by: ವಾಮನ ರಾಮಚಂದ್ರ ಮುಧೋಳಕರ್
Address: ಸಾಹಿತ್ಯ ಸೇವಾ ಸಮಿತಿ, ಕರ್ನಾಟಕ ಹೈಸ್ಕೂಲ್, ಧಾರವಾಡ

Synopsys

ವಾಲ್ಮೀಕಿ ರಾಮಾಯಣದ ಸೌಂದರ್ಯವನ್ನು ಸರಳ ಕನ್ನಡದಲ್ಲಿ ಕವಿ ಸಾಲಿ ರಾಮಚಂದ್ರರಾಯರು ಪ್ರಕಟಿಸಿದ ಕೃತಿ-ಶ್ರೀ ರಾಮಚರಿತದ ಬಾಲಕಾಂಡವು. ಈ ಕೃತಿಗೆ ಮುನ್ನುಡಿ ಬರೆದ ಸಾಹಿತಿ ಎ.,ಟಿ. ಸಾಸನೂರು ‘ಭಾರತೀಯ ಸಾಹಿತ್ಯದ ಬಹುಭಾಗವು ಅಂದರೆ ಕಾವ್ಯ, ಕಾದಂಬರಿ, ನಾಟಕ ಹೀಗೆ ಯಾವುದೇ ಆದರೂ ರಾಮಾಯಣ ಆವರಿಸಿದೆ. ರಾಮಾಯಣವು ಪೃಕೃತಿ ವರ್ಣನೆಗಲ್ಲ; ಅಲಂಕಾಲ ಸಂಪತ್ತಿಗೂ ಅಲ್ಲ; ರಾಮಚಂದ್ರನ ದಿವ್ಯ ಚರಿತ್ರೆಗೆ ಹಾಗೂ ಆತನ ಆದರ್ಶಪ್ರಾಯವಾದ ಸಂದೇಶದ ಪ್ರಸಾರಕ್ಕೆ ರಾಮಾಯಣ ಇಂದಿಗೂ ಇದ್ದು ಭಾರತೀಯ ಸಾಹಿತ್ಯಕ್ಕೆ ಅನುಪಮವಾದ ಸೌಂದರ್ಯ ನೀಡುತ್ತಿದೆ. ಆದರೆ, ರತ್ನದಂತಹ ಇಂತಹ ಕೃತಿಗೆ ಮುಂದೆ ಯಾವುದ್ಯಾವುದೋ ಕಾರಣಕ್ಕೆ ಧೂಳು ಮುತ್ತಿದೆ. ಅದನ್ನು ಬೆಳಗಿಸುವ ಕಾರ್ಯ ಆಗಬೇಕಿದೆ. ಸಾಲಿ ರಾಮಚಂದ್ರರಾಯರು ಈ ಕೆಲಸ ಮಾಡಿದ್ದಾರೆ. ರಾಮಾಯಣ ಮೂಲದ ಸಾರವನ್ನು ಮಾತ್ರ ಕೃತಿಯಲ್ಲಿ ತಂದಿರಿಸಿದ್ದಾರೆ. ಸಂಸ್ಕೃತದಿಂದ ಕನ್ನಡೀಕರಿಸಿದ ಈ ಕೃತಿಯಲ್ಲಿ ಬಳಸಿದ ಭಾಷೆ ಸರಳವಾಗಿದೆ. ಸಹಜವಾಗಿದೆ. ಅಶುದ್ಧವಾದ ಪದಗಳ ಪ್ರಯೋಗವಿಲ್ಲ. ಭಾಷೆಯನ್ನು ವಿಕಾರಗೊಳಿಸದೇ ಭಾವವನ್ನು ಹೃದಯಂಗಮವಾಗಿ ವ್ಯಕ್ತ ಮಾಡಲು ಯತ್ನಿಸಿದ್ದೇ ಈ ಕೃತಿಯ ಹೆಗ್ಗಳಕೆ.ಸಣ್ಣ ಮಕ್ಕಳೂ ಸಹ ಈ ಕಾವ್ಯದ ಮಾಧುರ್ಯಕ್ಕೆ ಮನ ಸೂತು ಹಾಡುವಂತಿದೆ ಎಂದು ಪ್ರಶಂಸಿಸಿದ್ದಾರೆ.

About the Author

ಸಾಲಿ ರಾಮಚಂದ್ರರಾಯ
(10 October 1888 - 31 October 1978)

’ಕನ್ನಡ ನೆಲದ ಪುಲ್ಲೆನಗೆ ಪಾವನ ತುಳಸಿ, ಕನ್ನಡದ ಕಲ್ಲೆನಗೆ ಶಾಲಗ್ರಾಮ ಶಿಲೆ’ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರು ಕನ್ನಡದ ನವೋದಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಕನ್ನಡದ ಮೊದಲ ವಿಲಾಪಗೀತೆ ರಚಿಸಿದ ಹಿರಿಮೆ ಅವರದು. ನವೋದಯದ ಆರಂಭದ ದಿನಗಳಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಗೆ ಮುಂದಾಗಿದ್ದ ಸಾಲಿಯವರು ಎರಡು ಕಾಂಡಗಳನ್ನು ಪ್ರಕಟಿಸಿದ್ದರು. ಅದಕ್ಕೆ ಬಂದ ’ಸಾಲಿ ರಾಮಾಯಣ’ ಎಂಬ ಟೀಕೆಯಿಂದ ಬೇಸತ್ತು ನಂತರದ ಸಂಪುಟಗಳನ್ನು ಪ್ರಕಟಿಸಲು ಹಿಂದೇಟು ಹಾಕಿದರು. ನಂತರದ ದಿನಗಳಲ್ಲಿ ಅಪ್ರಕಟಿತ ರಾಮಾಯಣದ ಹಸ್ತಪ್ರತಿಗಳು ಗೆದ್ದಲುಗಳಿಗೆ ಆಹಾರವಾದಾಗ ತೀವ್ರ ನೋವು ಅನುಭವಿಸಿದರು. ಅವರ ಸಮಗ್ರ ಕವಿತೆಗಳನ್ನು ಡಾ. ...

READ MORE

Related Books