ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ

Author : ಹೆಚ್. ರಾಮಚಂದ್ರಸ್ವಾಮಿ

Pages 496

₹ 160.00




Year of Publication: 2018
Published by: ಶ್ರೀ ರಾಮಕೃಷ್ಣ ಆಶ್ರಮ
Address: ಯಾದವಗಿರಿ, ಮೈಸೂರು

Synopsys

ಲೇಖಕ ಹೆಚ್. ರಾಮಚಂದ್ರ ಸ್ವಾಮಿ ಅವರ ಕೃತಿ-ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ. ಮೂಲ ರಾಮಾಯಣವು ಈಗ ಗುರುತಿಸಲು ಅಸಾಧ್ಯ ಎಂಬಷ್ಟು ರಾಮಾಯಣಗಳು ನಮ್ಮಲ್ಲಿವೆ. ಯಾವ ಮತ್ತು ಯಾರು ಬರೆದ ರಾನಮಾಯಣ ನೈಜವಾದದ್ದು ಎಂದು ಹೇಳುವುದು ಕಷ್ಟ. ಯಾವುದೇ ರಾಮಾಯಣದ ಮೂಲ ಆಶಯಕ್ಕೆ ಧಕ್ಕೆ ತಂದಿಲ್ಲ ಎಂಬುಷ್ಟು ಸ್ಪಷ್ಟ. ಮಕ್ಕಳಿಗಾಗಿ ರಾಮಾಯಣವನ್ನು ಸಂಕ್ಷಿಪ್ತವಾಗಿ ಬರೆಯಲು ಯಾವುದೇ ರಾಮಾಯಣ ಅನುಸರಿಸಿದರೂ ವ್ಯತ್ಯಾಸವಾಗದು. ಈ ಹಿನ್ನೆಲೆಯಲ್ಲಿ,ರಚಿಸಿದ ಕೃತಿ ಇದು. ಇಂತಹ ಕೃತಿಗಳು ಮಕ್ಕಳಲ್ಲಿಹಾಗೂ ದೊಡ್ಡವರಲ್ಲೂ ಬದುಕಿನ ಆದರ್ಶವನ್ನು, ಜೀವನದ ನಿರಂತರತೆಯನ್ನು ಧ್ವನಿಸುತ್ತವೆ. ಹಾಗೂ ಬದುಕನ್ನು ನಿರ್ದೇಶಿಸಿತ್ತವೆ.

About the Author

ಹೆಚ್. ರಾಮಚಂದ್ರಸ್ವಾಮಿ

ಡಾ. ಹೆಚ್. ರಾಮಚಂದ್ರ ಸ್ವಾಮಿ ಅವರು ತಮ್ಮ ಸ್ನಾತಕ ಪದವಿ ಅಧ್ಯಯನ ಕಾಲದಲ್ಲಿ (1958-61) ಶ್ರೀ ಜೆ.ಆರ್. ಲಕ್ಷ್ಮಣರಾಯರ ವಿದ್ಯಾರ್ಥಿ. ಅವರಿಂದ ಸಾವಯವ ರಸಾಯನ ವಿಜ್ಞಾನದಲ್ಲಿ ಸ್ಫೂರ್ತಿ ಪಡೆದವರು. ಕರ್ನಾಟಕ ಹಾಗೂ ಭಾರತ ಸರಕಾರಗಳಿಂದ ಅನುದಾನಿತವಾಗಿದ್ದ ನಾಲ್ಕು ಬೃಹತ್ ಸಂಶೋಧನಾ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಶೃಂಗೇರಿಯ ಸುತ್ತಮುತ್ತಣ ಸಹಜ ಅರಣ್ಯಗಳ ಏಕಸಸ್ಯ ತೋಪುಗಳ, ಸೊಪ್ಪಿನ ಬೆಟ್ಟಗಳ, ಕೃತಕವಾಗಿ ಬೆಳೆಯಿಸಿದ ಅರಣ್ಯಗಳ ಜೀವಿ ಪರಿಸ್ಥಿತಿಯ ಹಾಗೂ ಮಣ್ಣುಗಳ ಅಧ್ಯಯನ ಮಾಡಿದವರು. ಕೃತಿಗಳು: ವಿಶ್ವವಿಖ್ಯಾತ ರಸಾಯನ ವಿಜ್ಞಾನಿಗಳು, ಇಂಧನಗಳು, ಗಾಳಿ ಮತ್ತು ಅನಿಲಗಳು, ಅಣು ಪರಮಾಣು ಮತ್ತು ಸಂಯುಕ್ತಗಳು ...

READ MORE

Related Books