ಯುಧಿಷ್ಠಿರ

Author : ಎಂ.ವಿ. ಸೀತಾರಾಮಯ್ಯ

Pages 105

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಯುಧಿಷ್ಠಿರ' ಮಹಾಭಾರತದ ಪ್ರಮುಖ ಪಾತ್ರದ ಜೀವನ ಕಥೆಯ ಕೃತಿ ಇದು. ಲೇಖಕ ಎಂ.ವಿ. ಸೀತಾರಾಮಯ್ಯ ಅವರು ರಚಿಸಿದ್ದಾರೆ. ಅನೇಕ ಒತ್ತಡಗಳ ನಡುವೆಯೂ ಧರ್ಮಧ್ವಜವನ್ನು ಎತ್ತಿ ಹಿಡಿದು, ಸದಾಚಾರಗಳ ಸಾಕಾರ ಮೂರ್ತಿ ಎನಿಸಿಕೊಂಡಿರುವ ಮಹಾಭಾರತದ ಅಸಾಮಾನ್ಯ ವ್ಯಕ್ತಿತ್ವ. ಧರ್ಮಕ್ಕಾಗಿ ಎಲ್ಲವನ್ನೂ ತ್ಯಜಿಸಿದ ತ್ಯಾಗಮಯಿ ಧರ್ಮರಾಯ. ತನ್ನ ಧರ್ಮದ ಬಗೆಗೆ ಅಪಾರ ನಿಷ್ಟೆಯಲ್ಲಿ ಬದುಕಿದ ವ್ಯಕ್ತಿತ್ವ ಯುಧಿಷ್ಠಿರ. ತನ್ನ ಕೊನೆಯ ಕಾಲದಲ್ಲೂ ಧರ್ಮವೇ ದೊಡ್ಡದು ಎಂಬುದನ್ನು ತೋರಿಸಿಕೊಟ್ಟ ಮಹನೀಯ ...ಹೀಗೆ ಯುಧಿಷ್ಠರ ಪಾತ್ರದ ವಿಶ್ಲೇಷಣೆಯನ್ನು ಈ ಕೃತಿ ಒಳಗೊಂಡಿದೆ. 

About the Author

ಎಂ.ವಿ. ಸೀತಾರಾಮಯ್ಯ
(09 September 1910 - 12 March 1990)

ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ.  ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು.  ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ  ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ...

READ MORE

Related Books