ಇರಾನಿನ ವೀರರು

Author : ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)

Pages 158




Year of Publication: 1954
Published by: ಕನ್ನಡ ಪ್ರಪಂಚ ಪ್ರಕಾಶನ
Address: ಮಂಗಳೂರು-2

Synopsys

ಇರಾನಿನ ಮಹಾಕವಿ ಫಿದೋಷಿಯ ‘ಷಹ ನಾಮ’ ಬೃಹತ್ ಕೃತಿಯ ಒಂದು ಭಾಗವನ್ನು ಲೇಖಕ ಭಾರತೀಸುತರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ -ಇರಾನಿನ ವೀರರು. ವೆಲಿನ್ ಗೆಂಡಿ ಎಂಬುವರು ಈ ಮೊದಲು ಈ ಕೃತಿಯನ್ನು ಇಂಗ್ಲಿಷಿನಲ್ಲಿ ಬರೆದಿದ್ದರು. ಷಹನಾಮ ಎಂಬುದು ಇರಾನ್ ಭಾಷೆಯ ಮಹಾಕಾವ್ಯ. ಸೋಹ್ರಾಬ್ ಹಾಘೂ ರಸ್ತುಂ ಅವರ ಕತೆಯು ಈ ಮಹಾಕಾವ್ಯದ ಪ್ರಮುಖ ಭಾಗವಾಗಿದೆ.

ನಾಡಿನ ಅರಸರ ಚರಿತ್ರೆಗಳನ್ನು ಷಹನಾಮ ದಲ್ಲಿ ವರ್ಣಿಸಲಾಗಿದೆ. ಈ ಮಹಾಕಾವ್ಯವನ್ನು ಬರೆಯಲು ಹಚ್ಚಿದ್ದೇ ಚಕ್ರವರ್ತಿ ಘಜನಿ ಮೊಹಮ್ಮದ್. ಈ ಕಾವ್ಯ ಪೂರ್ಣಗೊಳ್ಳಲು 30 ವರ್ಷ ಹಿಡಿಯಿತು. 60 ಸಹಸ್ರ ಚಿನ್ನದ ನಾಣ್ಯಗಳನ್ನು (ವಾಗ್ದಾನದಂತೆ) ಕಳುಹಿಸುವ ಬದಲು ಬೆಳ್ಳಿಯ ನಾಣ್ಯಗಳನ್ನು ಕಳುಹಿಸಲಾಗಿತ್ತು. ಫಿರ್ಧೋಷಿ ಅದನ್ನು ಬಡಬಗ್ಗರಿಗೆ ನೀಡಿ ರಾಜನನ್ನು ಹಂಗಿಸಿದ. ರಾಜ ತನ್ನ ತಪ್ಪಿನ ಅರಿವಾಗಿ ಅದಕ್ಕೆ ದಂಡ ಎಂಬಂತೆ 1 ಲಕ್ಷ ಚಿನ್ನದ ನಾಣ್ಯಗಳನ್ನು ಕಳುಹಿಸಿದ. ಅದು ಆನೆ-ಒಂಟೆಗಳ ಮೇಲೆ ಬರುತ್ತಿದ್ದಂತೆ ಇತ್ತ ಫಿರ್ದೋಷಿ ತನ್ನ ಇಹ ಯಾತ್ರೆ ಮುಗಿಸಿದ್ದ.ಆತ ಬರೆದ ಷಹ ನಾಮದ ಒಂದು ಭಾಗದ ಕಥೆ ಇದಾಗಿದೆ.

About the Author

ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)
(15 May 1915 - 04 April 1976)

ಕೊಡಗು ಜಿಲ್ಲೆಯ ಬಿಳಿಗೇರಿಯಲ್ಲಿ ಜನಿಸಿದ ಶಾನಭಾಗ ರಾಮಯ್ಯ ನಾರಾಯಣರಾವ್ ಅವರು 'ಭಾರತೀಸುತ' ಎಂಬ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದ್ದ ಅವರು ಬಿಡುಗಡೆಯ ನಂತರ ಕಾದಂಬರಿ- ಸಾಹಿತ್ಯ ರಚನೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತರಾಗಿದ್ದ ಅವರು ಕೆಲಕಾಲ 'ರಾಷ್ಟಬಂಧು' ಮತ್ತು 'ಗುರುವಾಣಿ' ಎಂಬ ಪತ್ರಿಕೆ ನಡೆಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕಥೆ-ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಅವರು ರಚಿಸಿದ ’ಎಡಕಲ್ಲು ಗುಡ್ಡದ ಮೇಲೆ’, ’ಹುಲಿಯ ಹಾಲಿನ ಮೇವು’, ’ಗಿರಿಕನ್ನಿಕೆ’, ’ಬಯಲುದಾರಿ’ ಕಾದಂಬರಿಗಳು ಚಲಚಿತ್ರಗಳಾಗಿ ಯಶಸ್ವಿಯಾದವು.  ಸಂತಾನಭಿಕ್ಷೆ ಇಳಿದು ಬಾ ತಾಯಿ, ಬೆಂಕಿಯ ಮಳೆ, ವಕ್ರ ರೇಖೆ, ಸಾಧನ ಕುಟೀರ, ಹುಲಿಬೋನು, ಗಿಳಿಯು ಪಂಜರದೊಳಿಲ್ಲ, ...

READ MORE

Related Books