ಮಹಾ ಸಂಪರ್ಕ

Author : ಮನು (ಪೆನುಗೊಂಡೆ ನರಸಿಂಹರಂಗನ್‌)

Pages 684

₹ 428.00




Year of Publication: 2013
Published by: ಭಾರತೀ ಪ್ರಕಾಶನ
Address: ಸರಸ್ವರತಿಪುರಂ, ಮೈಸೂರು

Synopsys

ಪಿ.ಎನ್. ರಂಗನ್ ಅವರು ‘ಮನು’ ಕಾವ್ಯನಾಮದಿಂದ ಬರೆದ ಕೃತಿ- ಮಹಾ ಸಂಪರ್ಕ. ಮಹಾ ವಿದ್ವಾನ್ ಪ್ರೊ.ಎಸ್.ಕೆ. ರಾಮಚಂದ್ರರಾವ್ ಅವರು ಮುನ್ನುಡಿ ಬರೆದಿದ್ದಾರೆ. ಮೊದಲನೆ ಸಂಪುಟ ‘ತರ್ಕ’ದಲ್ಲಿ ಹಾಗೂ ಎರಡನೆ ಸಂಪುಟ ‘ಸಾಧ್ಯ’ದಲ್ಲಿ, ತಾರ್ಕಿಕವಾಗಿ, ವೈಜ್ಞಾನಿಕವಾಗಿ, ಋಗ್ವೇದ ಹಾಗೂ ಮಹಾಭಾರತಗಳ(ಸಾಹಿತ್ಯಕ) ಆಧಾರದ ಮೇಲೆ, ‘ದೇವಭೂಮಿ’ಯ ಉಪಸ್ಥಿತಿಯ (ಭೌಗೋಳಿಕ) ಆಧಾರದ ಮೇಲೆ, ಹಾಗೂ ಅನೇಕ ಸಾಂಸ್ಕೃತಿಕ, ಜಾನಪದ ಕಥಾನಕಗಳ ಆಧಾರದ ಮೇಲೆ ಬೇರೊಂದು ತಾರಾಲೋಕದಿಂದ ಬಂದಿಳಿದ-ಇಲ್ಲಿಯ ಜನರ ಜೊತೆ ಸಂಪರ್ಕ ನಡೆಸಿದ ಪ್ರಾಜ್ಞರ ಮಾತನ್ನು ಬಹಳ ಪ್ರಭಾವಶಾಲಿಯಾಗಿ ಮುಂದಿಡುತ್ತಾರೆ. ಇಲ್ಲಿಯ ಬರೆಹ ಶೈಲಿಯು ತುಂಬಾ ಪರಿಣಾಮಕಾರಿಯಾಗಿದೆ. ಜೊತೆಗೆ ವಿದ್ವತ್ ಪೂರ್ಣವೂ ಆಗಿದೆ. ಮಹಾಭಾರತವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ವಿಶ್ಲೇಷಿಸಿದ ಕೃತಿ ಇದು. 

About the Author

ಮನು (ಪೆನುಗೊಂಡೆ ನರಸಿಂಹರಂಗನ್‌)
(27 July 1946 - 08 November 2011)

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ 1946 ರ ಜುಲೈ 27 ರಂದು  ಮನು (ಪೆನುಗೊಂಡೆ ನರಸಿಂಹರಂಗನ್‌) ಜನಿಸಿದರು. ತಂದೆ ಪೆನುಗೊಂಡೆ ದೇಶಿಕಾಚಾರ್ಯರು, ತಾಯಿ ರಂಗನಾಯಕಮ್ಮ. ಮೆಕ್ಯಾನಿಕಲ್‌ ಎಂಜಿನಿಯರರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಾಹ್ಯ ವಿದ್ಯಾರ್ಥಿಯಾಗಿ  ಎಂ.ಎ. ಪದವೀಧರರು. ಮೈಸೂರು ವಿಶ್ವವಿದ್ಯಾಲಯದಿಂದ ಎಪಿಗ್ರಫಿ ಡಿಪ್ಲೊಮ ಮತ್ತು ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. (ಮನಃಶಾಸ್ತ್ರ) ಪದವೀಧರರು. ಮೈಸೂರಿನ ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ. ನಂತರ ಕೆ.ಜಿ.ಎಫ್‌.ನ ಭಾರತ್‌ ಅರ್ಥ್‌‌ಮೂವರ್ಸ್‌ನಲ್ಲಿ ಸಂಶೋಧನಾ ಎಂಜಿನಿಯರಾಗಿ, ಚೆನ್ನೈನ ಬ್ರೇಕ್ಸ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಪ್ರೊಡಕ್ಷನ್‌ ಎಂಜನಿಯರಾಗಿ,  ಪುಣೆಯ ಆಟೋಮೊಬೈಲ್‌ ರಿಸರ್ಚ್ ಅಸೋಸಿಯೇಷನ್‌ ಆಫ್‌ ಇಂಡಿಯಾದಲ್ಲಿ ಡೆಪ್ಯುಟಿ ಡೈರೆಕ್ಟರ್ , ...

READ MORE

Related Books