ಕರ್ಣಾಟಕ ಮಹಾಭಾರತ ಭೀಷ್ಮ ಪರ್ವ, ಸಂಪುಟ-7

Author : ಎನ್. ಅನಂತ ರಂಗಾಚಾರ್

Pages 169




Year of Publication: 1950
Published by: ಆರ್. ಅನಂತ ರಂಗಾಚಾರ್
Address: ಓರಿಯೆಂಟಲ್ ಲೈಬ್ರರಿ ಪಬ್ಲಿಕೇಷನ್ಸ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು

Synopsys

ಮೈಸೂರು ವಿಶ್ವವಿದ್ಯಾಲಯದ ಓರಿಯೆಂಟಲ್ ಲೈಬ್ರರಿ ಪಬ್ಲಿಕೇಷನ್ಸ್ ಪ್ರಾಚ್ಯಕೋಶಾಗಾರವು ರಚಿಸಿದ ತಜ್ಞರ ಮಂಡಳಿಯ ಪರಿಶೀಲನೆ ಅನ್ವಯ ಕರ್ನಾಟಕದ ಮಹಾಭಾರತದ ವಿವಿಧ ಪರ್ವಗಳ ಸಂಪುಟಗಳನ್ನು ಪ್ರಕಟಿಸಲಾಯಿತು. ಪ್ರಧಾನ ಸಂಪಾದಕರಾಗಿ ಎಂ.ಎಸ್. ಬಸವಲಿಂಗಯ್ಯ ಹಾಗೂ ಸಂಪಾದಕರಾಗಿ ಎನ್. ಅನಂತ ರಂಗಾಚಾರ್ ಇದ್ದು, ಆ ಪೈಕಿ ಪ್ರಸ್ತುತ ಕೃತಿಯು ಕುಮಾರ ವ್ಯಾಸ ವಿರಚಿತ ಕರ್ನಾಟಕ ಮಹಾಭಾರತದ ಭೀಷ್ಮ ಪರ್ವ, ಸಂಪುಟ-7' ಆಗಿದೆ.

ಭೀಷ್ಮನು ಕೌರವ ಸೇನಾಧಿಪತ್ಯವನ್ನು ವಹಿಸುವುದು, ಧರ್ಮರಾಯನು ಶತ್ರುಪಕ್ಷದ ವೀರರನ್ನು ಸೆಳೆಯುವ ಪ್ರಯತ್ನ, ಬಂಧುಗಳ ಕೊಲೆಗೆ ಇಷ್ಟಪಡದ ಅರ್ಜುನ, ಕೃರ್ಷನನ ಗೀತೋಪದೇಶ, ಭೀಷ್ಮನ ಮೇಲೆ ಶ್ರೀಕೃಷ್ಣನ ಸುದರ್ಶನ ಚಕ್ರ ಪ್ರಯೋಗ, ಅದನ್ನು ಭೀಷ್ಮನು ನಿವಾರಿಸುವ ಬಗೆ, ಧರ್ಮರಾಯ-ಭೀಷ್ಮನ ಸಂವಾದ, ಅರ್ಜುನನ ಯುದ್ಧ, ಕೌರವ ಸೈನ್ಯ ನಾಶ, ಭೀಷ್ಮಾರ್ಜುನರ ಸಮಯುದ್ಧ, ಶಿಖಂಡಿಯ ಎದುರಿನಲ್ಲಿ ಭೀಷ್ಮನ ಶಸ್ತ್ರ ತ್ಯಾಗ ಹಾಗೂ ಶರಶಯ್ಯೆಯಲ್ಲಿ ಭೀಷ್ಮನ ಮರಣ ಹೀಗೆ ವಿವಿಧ ಅಧ್ಯಾಯಗಳಡಿ ಭೀಷ್ಮ ಪರ್ವದ ಸಂಪೂರ್ಣ ವಿವರ ನೀಡಲಾಗಿದೆ.

About the Author

ಎನ್. ಅನಂತ ರಂಗಾಚಾರ್ - 28 October 1997)

ಕ್ರಿ.ಶ. 1904 ಜೂನ್ ತಿಂಗಳಲ್ಲಿ , ಎನ್ . ಅನಂತರಂಗಾಚಾರ್, ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ ಜನಿಸಿದರು. ತಂದೆ ಶ್ರೋತ್ರೀಯ ಬ್ರಾಹ್ಮಣ ನರಸಿಂಹಾಚಾರ್ಯರು. ಆಚಾರ್ಯರೇ ಒಂದೆಡೆ ಹೇಳಿರುವಂತೆ ಇವರೇ ಅವರಿಗೆ ಕಾಯಕ ಮೌಲ್ಯವನ್ನೂ ಕಾಲಪ್ರಜ್ಞೆಯನ್ನು ಕಲ್ಪಿಸಿಕೊಟ್ಟವರು. ನಾಲ್ಕನೇ ವರ್ಷದಿಂದ ಹದಿಮೂರನೇ ವರ್ಷದವರೆಗೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಜೊತೆಯಲ್ಲಿಯೇ ಇರಿಸಿಕೊಂಡು ಆ ಅವಧಿಯಲ್ಲಿ ವೇದ , ಪ್ರಬಂಧ , ಪ್ರಯೋಗ , ಸಂಸ್ಕೃತ  ಕಲಿಸಿದರು .ತಿ. ನರಸೀಪುರದ ಎ.ವಿ. ಸ್ಕೂಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ, ನಂತರ, ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು .ಮೈಸೂರು ...

READ MORE

Related Books