ಮಹಾಭಾರತ ಬೆಳೆದ ಬಗೆ

Author : ಎಸ್‌.ಆರ್‌. ರಾಮಸ್ವಾಮಿ

Pages 172

₹ 176.00




Year of Publication: 2020
Published by: ಅಭಿಜ್ಞಾನ ಪ್ರಕಾಶನ
Address: ಬೆಂಗಳೂರು

Synopsys

ಮಹಾಭಾರತ ಬೆಳೆದ ಬಗೆ-ಲೇಖಕ ಎಸ್.ಆರ್. ರಾಮಸ್ವಾಮಿ ಅವರ ಕೃತಿ. ಸಮಸ್ತ ಭಾರತೀಯ ವಿದ್ಯೆಗಳ ಕುರಿತು ಒಂದೆಡೆಗೆ ನೀಡಿದ್ದೇ ಭಾರತಿತೀರ್ಥ. ಈ ಮಾಲಿಕೆಯಲ್ಲಿ ಭಾರತದ ಋಷಿ – ಮುನಿಗಳು, ತೀರ್ಥಕ್ಷೇತ್ರಗಳು, ಸಾಹಿತ್ಯ–ಕಲಾಪ್ರಕಾರಗಳು, ದರ್ಶನಗಳು, ಸಿದ್ಧಾಂತ–ಕಲ್ಪನೆಗಳು, ವಿಜ್ಞಾನ–ಇತಿಹಾಸ, ಜೀವನಪದ್ಧತಿ ಎಲ್ಲವೂ ಭಾರತಿ ತೀರ್ಥದಲ್ಲಿ ಒಳಗೊಂಡಿವೆ. ಪುಣೆಯ ಭಾಂಡಾರಕರ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆಯಡಿ ದೇಶದ ವಿದ್ವತ್‌ ಪ್ರಪಂಚದಲ್ಲಿ ಸಾಧಿಸಿರುವ ಅನೇಕ ಮಹತ್ಕಾರ್ಯಗಳಲ್ಲಿ ವ್ಯಾಸಕೃತ ಮಹಾಭಾರತದ ಪಾಠ ಪರಿಷ್ಕರಣ ಕಾರ್ಯವೂ ಒಂದು. ಈ ಸಂಪಾದನ ಕಾರ್ಯದ ಪರಿಚಯವೇ ಮಹಾಭಾರತ ಬೆಳೆದ ಬಗೆ.

 

 

About the Author

ಎಸ್‌.ಆರ್‌. ರಾಮಸ್ವಾಮಿ

ನಾಡೋಜ ಎಸ್‌.ಆರ್‌.ರಾಮಸ್ವಾಮಿ ಅವರು ಪತ್ರಕರ್ತರಾಗಿ, ಲೇಖಕರಾಗಿ, ಚಿಂತಕರಾಗಿ, ವಿಮರ್ಶಕರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ನಾಡಿನಲ್ಲಿ ಸುಪರಿಚಿತರು. ಮೂಲತಃ ಬೆಂಗಳೂರಿನವರೇ ಆದ ರಾಮಸ್ವಾಮಿ ಅವರು ಕನ್ನಡ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್, ಜರ್ಮನ್, ಫ್ರೆಂಚ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದವರು. 1950ರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು, 1972 ರಿಂದ 79ರ ವರೆಗೆ ಸುಧಾ ವಾರಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ರಾಷ್ಟೋತ್ಥಾನ ಸಾಹಿತ್ಯ ಮತ್ತು ಉತ್ಥಾನ ಮಾಸಪತ್ರಿಕೆಯ ಗೌರವ ಪ್ರಧಾನ ಸಂಪಾದಕರಾದ ಇವರು ಇಂದಿಗೂ ಆ ಹುದ್ದೆಯಲ್ಲಿ ಸೇವಾನಿರತರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 55 ಕ್ಕೂ ...

READ MORE

Related Books