ಲೋಕಯಾತ್ರೆ

Author : ಜಿ.ಎಸ್. ಆಮೂರ

Pages 184

₹ 100.00




Year of Publication: 2014
Published by: ಪ್ರಿಯದರ್ಶಿನಿ ಪ್ರಕಾಶನ
Address: # 138, 7ನೇ ಸಿ ಮೇನ್, ಹಂಪೆ ನಗರ, ಬೆಂಗಳೂರು-560104

Synopsys

ಕನ್ನಡದ ಆದಿ ಕವಿ ಪಂಪನಿಂದ ಹಿಡಿದು ಇತ್ತೀಚಿನ ಎಸ್.ಎಲ್. ಭೈರಪ್ಪ ಅವರತನಕ ಮಹಾಭಾರತವನ್ನು ತಮ್ಮದೇ ಆದ ದೃಷ್ಟಿಕೋನದಿಂದ ಅಳೆದು-ತೂಗಿ ಕಥೆ-ಕಾದಂಬರಿ-ಕಾವ್ಯವನ್ನು ಹೆಣೆದಿದ್ದಾರೆ. ಕಥೆ ಒಂದೇ ಆದರೂ ವಿಭಿನ್ನ ದೃಷ್ಟಿಕೋನದಿಂದ ಪ್ರತಿ ಕೃತಿಯು ಕಂಗೋಳಿಸುತ್ತವೆ. ಸಾಹಿತ್ಯಕ ಮೌಲ್ಯವೂ ಒಳಗೊಂಡಿವೆ. ವಿಮರ್ಶಕ ಜಿ.ಆಎಸ್. ಆಮೂರ ಅವರು ಮಹಾಭಾರತ ಕಥೆಯನ್ನೇ ಮೂಲವಾಗಿಟ್ಟುಕೊಂಡು ಅದರ ಎಲ್ಲ ಆಯಾಮಗಳನ್ನು ದರ್ಶನ ಮಾಡಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಕಾವ್ಯದಲ್ಲಿಯ ಕೆಲವು ಮಹತ್ವದ ಸಂಸ್ಕೃತ ಶ್ಲೋಕಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿ, ವಿಶೇಷ ಅರ್ಥ ಕಲ್ಪಿಸಿ ತಮ್ಮದೇ ಆದ ವ್ಯಾಖ್ಯಾನ-ವಿಶ್ಲೇಷಣೆಗೆ ಒಳಪಡಿಸಿದ್ದು, ಈ ಕೃತಿಯ ಹೆಗ್ಗಳಿಕೆ. ಈ ಕೃತಿಗೆ ಮುನ್ನುಡಿ ಬರೆದ ಸಾಹಿತಿ -ಚಿಂತಕ. ಎಸ್. ರಾಮಸ್ವಾಮಿ ‘. ಅಮೂರರ ದೃಷ್ಟಿಯಲ್ಲಿ ಮಹಾಭಾರತ ‘ಶ್ರೇಷ್ಠ ಲೌಕಿಕ ಕಾವ್ಯ, ಮಾನುಷ ಲೋಕದ ಕಥೆ’. ಮಾನವನ ಕಠಿಣ ಲೋಕಯಾತ್ರೆ ಯಶಸ್ವಿಯಾಗಬೇಕಾದರೆ ಪಾಥೇಯ ಅವಶ್ಯ. ಈ ಯಾತ್ರೆಗೆ ಬೇಕಾದ ಜ್ಞಾನ ಮತ್ತು ಮಾರ್ಗಗಳ ಚರ್ಚೆ ಇಲ್ಲಿದೆ’ ಎಂದು ಕೃತಿಯ ಪಕ್ಷಿನೋಟವನ್ನು ನೀಡಿದ್ದಾರೆ.

About the Author

ಜಿ.ಎಸ್. ಆಮೂರ
(08 May 1925 - 28 September 2020)

ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...

READ MORE

Related Books