ವಚನ ದೀಪಿಕೆ

Author : ಜಿ. ಕೃಷ್ಣಪ್ಪ

Pages 768

₹ 800.00




Year of Publication: 2021
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: #176, 12ನೇ ಕ್ರಾಸ್, ಮಾಗಡಿ ಮುಖ್ಯ ರಸ್ತೆ, ಅಗ್ರಹಾರ ದಾಸರಹಳ್ಳಿ, ಬೆಂಗಳೂರು-560079
Phone: 9972109209

Synopsys

‘ವಚನ ದೀಪಿಕೆ’ ಕೃತಿಯು ಜಿ. ಕೃಷ್ಣಪ್ಪ ಅವರ ಶ್ರೀಕುವೆಂಪು ಸೃಜಿಸಿದ ಶ್ರೀರಾಮಾಯಣದರ್ಶನಂ ಆಧುನಿಕ ಸಾಹಿತ್ಯದ ಲೋಕೋತ್ತರ ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಮಲ್ಲೇಪುರಂ ಜಿ. ವೆಂಕಟೇಶ ಅವರು, ಈ ಮಹಾಕಾವ್ಯವು ಕನ್ನಡ ಜನಮಾನಸವನ್ನು ಅಪ್ಪಿಕೊಂಡದ್ದುಇದೀಗ ಇತಿಹಾಸವಾಗಿದೆ. ಈ ಮಹಾಕಾವ್ಯದ ಓದುವಿಕೆಯೇ ರಸಾನುಭೂತಿಯನ್ನು ಉಳ್ಳದ್ದು. ಈ ಮಹಾಕೃತಿಯ ಪ್ರವೇಶಕ್ಕೆ ಹಲವು ಗದ್ಯರೂಪೀ ಕೃತಿಗಳು ಈಗಾಗಲೇ ಹೊರಬಂದಿವೆ. ಪ್ರೊ. ದೇಜಗೌ ಅವರ ವಚನಚಂದ್ರಿಕೆಯು ಮೊದಲು ಪ್ರವೇಶ ಪಡೆಯಿತು. ಅನಂತರ ಕೆಲವು ಕೃತಿಗಳು ಹೊರಬಂದವು. ಡಾ. ಜಿ. ಕೃಷ್ಣಪ್ಪ ಅವರು ಬೇಂದ್ರೆ ಮತ್ತು ಕುವೆಂಪು ಅವರನ್ನು ತಮ್ಮ ಎರಡು ಕಣ್ಣುಗಳೆಂದು ಭಾವಿಸಿದ್ದಾರೆ. ಈಗಾಗಲೇ ಬೇಂದ್ರೆ ಕಾವ್ಯದ ಒಳಹೊಕ್ಕು ಹಲವು ಕೃತಿಗಳನ್ನು ತಂದು ರಸಿಕರ ಹಾಗೂ ಕಾವ್ಯಾಸ್ತಕರ ಕಣ್ಣನ್ನು ತೆರೆಸಿದ್ದಾರೆ. ಶ್ರೀಕುವೆಂಪು ಅವರನ್ನು ಕುರಿತು ಎರಡು-ಮೂರು ಕೃತಿಗಳು ಈಗಾಗಲೇ ಅವರಿಂದ ಬಂದಿವೆ. ಶ್ರೀಕುವೆಂಪು ಅವರ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದ ’ವಚನದೀಪಿಕೆ’ ಯನ್ನು ಕನ್ನಡ ಸಹೃದಯಲೋಕಕ್ಕೆ ಅವರು ಈಗ ಅರ್ಪಿಸುತ್ತಿದ್ದಾರೆ. ಡಾ. ಜಿ. ಕೃಷ್ಣಪ್ಪ ಅವರ ಮೂರು ಸಂವತ್ಸರಗಳ ನಿರಂತರ ಪರಿಶ್ರಮದ ಫಲವಾಗಿ ‘ಶ್ರೀರಾಮಾಯಣದರ್ಶನಂ’ ಕಾವ್ಯವು ಗದ್ಯರೂಪೀ ಮಹಾಕೃತಿಯಾಗಿ ಅವತರಣಗೊಂಡಿರುವುದು ಕನ್ನಡ ನಾಡಿನ ಭಾಗ್ಯವಿಶೇಷ. ಜಿ. ಕೃಷ್ಣಪ್ಪ ಅವರ ಸಾರಸ್ವತ ಹಾದಿಯಲ್ಲಿ ‘ಶ್ರೀರಾಮಾಯಣದರ್ಶನಂ ವಚನದೀಪಿಕೆ’ ಮೈಲಿಗಲ್ಲಾಗಿದೆ ಎಂದಿದ್ದಾರೆ.

About the Author

ಜಿ. ಕೃಷ್ಣಪ್ಪ

’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ  ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ  ಬರವಣಿಗೆಗೆ ...

READ MORE

Related Books