ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು

Author : ಕೆ.ಎಸ್‍. ನಾರಾಯಣಾಚಾರ್ಯ

Pages 178

₹ 25.00




Year of Publication: 1998
Published by: ಲೋಕಶಿಕ್ಷಣ ಟ್ರಸ್ಟ್
Address: ಹುಬ್ಬಳ್ಳಿ-ಬೆಂಗಳೂರು

Synopsys

ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ-ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು. ಈ 2ನೇ ಆವೃತ್ತಿಯಾಗಿದೆ. ಕಾಲನ ನಡೆಯಲ್ಲಿ ಉರುಳಿದ ಇತಿಹಾಸ, ಗೇಲಿ ತಂದ ಸರ್ವನಾಶ, ಶ್ರೀಕೃಷ್ಣನ ಅಂತಃಪುರದಲ್ಲಿ, ಉದ್ಧವ, ಅಕ್ರೂರರೊಡನೆ ಸಮಾಲೋಚನೆ, ಕೊನೆಯ ಉಪದೇಶ, ಮಹಾಪ್ರಸ್ಥಾನ, ಮಹಾಪಾನ ಸರ್ವನಾಶ, ಬಲಭದ್ರನ ನಿರ್ಯಾಣ, ಶ್ರೀಕೃಷ್ಣಾವಸಾನದ ಕೊನೆಯ ನೆನಪುಗಳು, ಯುಧಿಷ್ಠರನ ನಿಶ್ಚಯ, ಅರ್ಜುನನ ಸೋಲು, ಧರ್ಮಜ ಸ್ವರ್ಗಕ್ಕೇರಿದ್ದು, ಹೀಗೆ 20 ಅಧ್ಯಾಯಗಳ ಮೂಲಕ ಶ್ರೀಕೃಷ್ಣನ ಕೊನೆಯ ಗಳಿಗೆಗಳ ಸಂಪೂರ್ಣ ಚಿತ್ರಣ ನೀಡಿರುವ ಕೃತಿ ಇದು.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books