ಶ್ರೀಮನ್ಮಹಾಭಾರತ ಕಥಾಮೃತಂ

Author : ದೇರಾಜೆ ಸೀತಾರಾಮಯ್ಯ

Pages 968

₹ 700.00




Year of Publication: 2018
Published by: ಜ್ಞಾನಗಂಗಾ ಪುಸ್ತಕ ಮಳಿಗೆ
Address: ಪುತ್ತೂರು- 574201, ದ.ಕ ಜಿಲ್ಲೆ
Phone: 09480451560.

Synopsys

ಹಿರಿಯ ಲೇಖಕ ದೇರಾಜೆ ಸೀತಾರಾಮಯ್ಯ ಅವರ ಕೃತಿ-ಶ್ರೀಮನ್ಮಹಾಭಾರತ ಕಥಾಮೃತಂ (ದೇರಾಜೆ ಭಾರತ). ವ್ಯಾಸನ ಮಹಾಭಾರತವನ್ನು ಮೂಲವಾಗಿಟ್ಟುಕೊಂಡು ತಮ್ಮದೇ ದೃಷ್ಟಿಯಲ್ಲಿ ಚಿತ್ರಿಸಿರುವ ಇಲ್ಲಿಯ ವಿಚಾರಗಳ ಚಿತ್ರಣವು ಲೇಖಕರು ಸೂಕ್ಷ್ಮ ದೃಷ್ಟಿ, ಅರ್ಥಗ್ರಹಿಕೆಯ ಜಾಣ್ಮೆ, ನಿರೂಪಣಾ ಕೌಶಲ ಇತ್ಯಾದಿ ಆಕರ್ಷಣೆಗಳಿಂದ ಓದುಗರ ಗಮನ ಸೆಳೆಯುತ್ತದೆ.

About the Author

ದೇರಾಜೆ ಸೀತಾರಾಮಯ್ಯ
(17 November 1914 - 05 October 1984)

ಹಿರಿಯ ಚಿಂತಕ-ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದ ದೇರಾಜೆ ಸೀತಾರಾಮಯ್ಯ ಅವರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದವರು. ಜಮೀನುದಾರರು. ತಂದೆ ಮಂಗಲ್ಪಾಡಿ ಕೃಷ್ಣಯ್ಯ, ತಾಯಿ ಸುಬ್ಬಮ್ಮ. ಯಕ್ತಗಾನ ಕಲಾವಿದರ ಮನೆತನ. ಪ್ರಾಥಮಿಕ ಶಾಲೆಯ ಗುರು ಕೊಟ್ಟೆಕಾಯಿ ನಾರಾಯಣ ರಾಯರ ಕುಮಾರವ್ಯಾಸ ಕುರಿತ ಪಾಠದಿಂದ ಅಭಿನಯ, ಸಾಹಿತ್ಯಾಸಕ್ತಿ ಮೂಡಿತು. ಯಕ್ಷಗಾನ, ತಾಳಮದ್ದಳೆ, ನಾಟಕ, ರಂಗಭೂಮಿಯ ಬಗ್ಗೆ ಸಂಶೋಧನೆ - ವಿಮರ್ಶೆಗಳು ಹೀಗೆ ವೈವಿಧ್ಯಮಯ ಸಾಹಿತ್ಯ ರಚಿಸಿದ್ದು ಇವರ ವೈಶಿಷ್ಟ್ಯ. ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷರಾಗಿದ್ದರು. ಪುತ್ತೂರು ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷರು, ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಕೃತಿಗಳು: ಭೀಷ್ಮಾರ್ಜುನ ...

READ MORE

Related Books