ಆಪ್ತ ಸಲಹೆ ಸಮಾಧಾನ

Author : ಸಿ.ಆರ್. ಚಂದ್ರಶೇಖರ್

Pages 124

₹ 65.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಮಾನಸಿಕ ಒತ್ತಡ, ಮನಃಕ್ಲೇಶ, ಬೇಸರ, ದುಃಖ, ಭಯ, ಕೋಪ, ಅಸಹಾಯಕತೆಗಳಿಗೆ ಒಳಗಾದವರು ಯಾರಿದ್ದಾರೆ? ಆಬಾಲವೃದ್ಧರಾದಿಯಾಗಿ, ಎಲ್ಲ ವರ್ಗದವರು, ಎಲ್ಲ ವೃತ್ತಿಯಲ್ಲಿರುವವರು, ಸ್ತ್ರೀಪುರುಷರು ಇವಕ್ಕೆ ಹೊರತಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲದೆ ಪಕ್ಕದಲ್ಲಿ ಕುಳಿತು, ಬೆನ್ನು ಸವರಿ ಕೈಹಿಡಿದು ‘ಮುಂದಿನ ದಾರಿ ಹೀಗೆ ಸಾಗಬಹುದಾ’ ಎಂದು ಸಾಂತ್ವಾನ, ಸಲಹೆ ನೀಡುವ ಕೃತಿ ಇದು. ದುಃಖಿತರಿಗೆ, ಸಂಕಟದಲ್ಲಿರುವವರಿಗೆ, ಆತಂಕ, ಬೇಸರಗಳಿಂದ, ಸೋಲು, ನಿರಾಶೆಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾದವರಿಗೆ, ದೈಹಿಕ-ಮಾನಸಿಕ ರೋಗಗಳಿಗೆ ತುತ್ತಾದವರಿಗೆ ಸಂಜೀವಿನಿಯಾಗಬಲ್ಲದು. 1966ರಲ್ಲಿಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ’ಗೆ ಈ ಕೃತಿ ಭಾಜನವಾಗಿದೆ.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books