ಸಮಸ್ಯೆ ಸಮಾಧಾನ

Author : ಯಂಡಮೂರಿ ವೀರೇಂದ್ರನಾಥ್

Pages 184

₹ 160.00




Year of Publication: 2017
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ-580020

Synopsys

ಸಮಸ್ಯೆ-ಸಮಾಧಾನ ಎಂಬುದು ಲೇಖಕ ಯಂಡಮೂರಿ ವೀರೇಂದ್ರನಾಥ ಅವರ ಪ್ರೇರಣಾತ್ಮಕ ಬರಹಗಳ ಕೃತಿ. ಆಧುನಿಕ ಬದುಕಿನ ಒತ್ತಡಗಳು ವಿವಿಧ ಆಯಾಮಗಳಲ್ಲಿ ತಮ್ಮ ಕರಾಳತೆಯ ಪ್ರಭಾವವನ್ನು ಬೀರುತ್ತಿವೆ. ಇದರಿಂದ ಮನುಷ್ಯನ ಬದುಕು ತತ್ತರಿಸುತ್ತಿದೆ. ಇಂತಹ ಒತ್ತಡಗಳಿಂದ ಹೇಗೆ ಮುಕ್ತನಾಗಬೇಕು ಎಂಬ ಸಮಸ್ಯೆ ವಿಶೇಷವಾಗಿ ಯುವಕರನ್ನು ಕಾಡುತ್ತಿದೆ. ಉದ್ಯೋಗ, ಓದು, ಪ್ರೇಮ ವ್ಯವಹಾರ, ಹಣ ಸಂಪಾದನೆ, ಬದುಕಿನ ಭದ್ರತೆ, ಕಚೇರಿಯ ಒತ್ತಡಗಳು, ಅನಗತ್ಯ ಭಯ ಇತ್ಯಾದಿ ಒತ್ತಡಗಳ ಭೀತಿಯ ನೆರಳು ಆವರಿಸಿಕೊಳ್ಳುತ್ತಿದೆ. ಇವುಗಳಿಗೆ ಪರಿಹಾರವಾಗಿಯೂ, ಬದುಕಿನ ಪ್ರೀತಿ ಹೆಚ್ಚಿಸಿಕೊಳ್ಳುವಂತೆಯೂ ಇಲ್ಲಿಯ ಬರಹಗಳಿವೆ.

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books