ನಾವು ಮಕ್ಕಳು ಮತ್ತು ಶಿಕ್ಷಣ

Author : ಗಿರಿಮನೆ ಶ್ಯಾಮರಾವ್

Pages 150

₹ 120.00




Published by: ಗಿರಿಮನೆ ಪ್ರಕಾಶನ
Address: ಲಕ್ಷ್ಮೀಪುರಂ ಬಡಾವಣೆ ಸಕಲೇಶಪುರ - 573134
Phone: 9739525514

Synopsys

ಲೇಖಕ ಗಿರಿಮನೆ ಶ್ಯಾಮರಾವ್‍ರ ಮಕ್ಕಳು ಹಾಗೂ ಅವರ ವಿಕಸನದ ಕುರಿತು ಆಲೋಚನೆ ಹಾಗೂ ಕೂತೂಹಲಗಳು ಕವಲೊಡೆದರ ಪರಿಣಾಮವಾಗಿ ಹೊರಬಂದ, ವ್ಯಕ್ತಿತ್ವ ವಿಕಸನಕ್ಕೆ ಸಂಭಂದಿಸಿದ ಮತ್ತೊಂದು ಕೃತಿಯೇ ‘ನಾವೂ ಮಕ್ಕಳು ಮತ್ತು ಶಿಕ್ಷಣ’. ಪ್ರಸ್ತುತ ಕೃತಿಯನ್ನು ಜೀವನದ ಅನುಭವಗಳ ಸುತ್ತಲೇ ಹೆಣೆದಿರುವುದು ವಿಶೇಷ. ಮನುಷ್ಯ ಜೀವನದಲ್ಲಿ ಎದುರಾಗುವ ಹಲವಾರು ಸವಾಲುಗಳು, ಅನುಭವಗಲು, ಪ್ರಸಂಗಗಳು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಅಂತಹ ಕ್ಲಿಷ್ಟಕರ ಸಂದರ್ಭಗಳಿಗೆ ನಮ್ಮ ಮಕ್ಕಳನ್ನು ತಯಾರಿಸುವುದು ಹೇಗೆ ಎಂಬುದರ ಬಗ್ಗೆ ಲೇಖನ ಮತಾಡುತ್ತದೆ. ಈ ಎಲ್ಲಕ್ಕಿಂತ ವಿಶೇಷವಾಗಿ ಮಕ್ಕಳಲ್ಲಿರುವ ಅತ್ಯಂತ ಪ್ರಶಂಸನೀಯ ಗುಣ ಹಾಗು ಎಂತಹ ಮೇಧಾವಿಯನ್ನು ತಬ್ಬಿಬ್ಬಗಿಸುವ ಗುಣ ಎಂದರೆ ಅದು ಮಕ್ಕಳು ಪ್ರಶ್ನೆ ಕೇಳುವುದು. ಹೌದು, ಮಕ್ಕಳ ಯೋಚನಾ ಶಕ್ತಿ ಅಗಾದ, ಅವರಲ್ಲಿ ಚಿಗುರೊಡೆಯುವ ಪ್ರಶ್ನೆಗಳು ತಮಾಷೆ ಎನ್ನಿಸಿದರು, ಉತ್ತರಿಸಲು ಕಷ್ಟ. ಹೀಗಾಗಿ ಲೇಖಕರು ಪ್ರಸ್ತುತ ಕೃತಿಯಲ್ಲಿ ಮಕ್ಕಳ ಆ ಪ್ರಶ್ನೆಗಳ ನಿಗೂಢತೆ ಅದಕ್ಕೆ ಉತ್ತರಿಸುವ ಜಾಣ್ಮೆಯ ಕುರಿತು ಮಾತನಾಡಿದ್ದಾರೆ. ಗಿರಿಮನೆ ಶ್ಯಾಮರಾವ್ ಅವರು ಆಧುನಿಕ ಶಿಕ್ಷಣ ಪದ್ಧತಿ ಅದರಲ್ಲಿ ಮಕ್ಕಳು ಪೋಷಕರು ಹಗೂ ಶಿಕ್ಷಕರ ನಡುವಿನ ವಿನೂತನ ಸಂಭಂದ, ಈ ಆಧುನಿಕ ಯುಗದಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲದ್ದಾರೆ. ತಜ್ಞರ ಅಭಿಪ್ರಾಯಗಳೊಂದಿಗೆ ಮಕ್ಕಳ ಏಳಿಗೆಗೆ ಬರೆದಿರುವ ಈ ಕೃತಿ ಅಧುನಿಕ ಕಾಲಘಟ್ಟದಲ್ಲಿ ಪ್ರತಿ ಮಗು ಹಗೂ ಪೋಷಕರಿಗೆ ಅವಶ್ಯಕವದ ಕಿವಿಮಾತು.

About the Author

ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ...

READ MORE

Related Books