ಬಾಳುವಂಥ ಹೂವೇ, ಬಾಡುವಾಸೆ ಏಕೆ?

Author : ಪಿ.ವಿ. ಭಂಡಾರಿ

Pages 184

₹ 160.00




Year of Publication: 2019
Published by: ಸಾವಣ್ಣ ಎಂಟರ್ ಪ್ರೈಸಸ್
Address: #57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ ಬೆಂಗಳೂರು-560004
Phone: 9845224979

Synopsys

ಅತ್ಯುತ್ತಮ ಮನೋವೈದ್ಯರಲ್ಲೊ ಒಬ್ಬರಾದ ಪಿ.ವಿ. ಭಂಡಾರಿಯವರು ಮನಶಾಸ್ತ್ರಜ್ಞ ನಾಗರಾಜ ಮೂರ್ತಿ  ಅವರೊಡನೆ ಸೇರಿ ಬರೆದ ಕೃತಿ ’ಬಾಳುವಂಥ ಹೂವೇ, ಬಾಡುವಾಸೆ ಏಕೆ?”. ಪಿ.ವಿ. ಭಂಡಾರಿ ಎರಡು ದಶಕಗಳ ಕಾಲ ಮದ್ಯವ್ಯಸನದ ವಿರುದ್ಧ ಹೋರಾಡಿದವರು. ಅದಕ್ಕೆಂದೇ ರಾಜ್ಯ ಸರ್ಕಾರದಿಂದ ’ಸಂಯಮ’ ಪ್ರಶಸ್ಗಿಗೂ ಪಾತ್ರರಾದವರು. ನಾಗರಾಜ ಮೂರ್ತಿ 13 ವರ್ಷಗಳ ಕಾಲ ಮನಃಶಾಸ್ತ್ರ ಕ್ಷೇತ್ರದಲ್ಲಿ ಕೆಲಸ ಮಾಡಿದವರು. 

ಮದ್ಯಪಾನದ ಸಮಸ್ಯೆಗಳನ್ನು ವಿವರಿಸುವ ಕೃತಿ, ಚಟಕ್ಕೆ ಕಾರಣಗಳು ಮತ್ತು ಅದಕ್ಕೆ ಇರುವ ಪರಿಹಾರೋಪಾಯಗಳನ್ನು ಸೂಚಿಸುತ್ತದೆ. ವ್ಯಸನಕ್ಕೆ ಸಂಬಂಧಿಸಿದ ಮೌಢ್ಯ, ಅದರಿಂದ ಜನರು ದಾಸರಾಗುವುದು, ವಿವಿಧ ಚಿಕಿತ್ಸಾ ವಿಧಾನದ ಮೂಲಕ ಮದ್ಯಪಾನ ಇಲ್ಲವಾದ ಬಗೆಯನ್ನು ವಿವರಿಸುತ್ತದೆ. 

About the Author

ಪಿ.ವಿ. ಭಂಡಾರಿ

ಡಾ. ಪಿ.ವಿ. ಭಂಡಾರಿ ವೈದ್ಯರು. ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾನಿಲಯದಲ್ಲಿ ಎಂ.ಬಿ.ಬಿ.ಎಸ್, ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಮನೋವೈಜ್ಞಾನಿಕ ಚಿಕಿತ್ಸೆಯಲ್ಲಿ ಡಿಪ್ಲೊಮಾ, ಮಂಗಳೂರಿನ ಫಾ. ಮುಲ್ಲರ್ಸ್ ವೈದ್ಯಕೀಯ ಮಹಾ ವಿದ್ಯಾನಿಲಯದಿಂದ ಡಿ.ಎನ್.ಬಿ (ಮನೋವೈಜ್ಞಾನಿಕ ಚಿಕಿತ್ಸೆ) ಪದವಿ ಪಡೆದರು. ತಾಲ್ಲೂಕು ಕನ್ನಡ ಸಾಹಿತ್ಯ ಪ್ರಶಸ್ತಿ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಡಾ. ಎಸ್.ಎಸ್. ಜಯರಾಂ ಪ್ರಶಸ್ತಿ, ಸ್ಪಂದನ ಪ್ರಶಸ್ತಿ, ಶ್ರೇಷ್ಠ ಮನೋವೈದ್ಯ-2012 ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡುವ 2012ರ ಸಂಯಮ ಪ್ರಶಸ್ತಿಗಳು ಸಂದಿವೆ. ಕಳೆದ 15 ವರ್ಷಗಳಿಂದ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ತಜ್ಞ ಮನೋವೈದ್ಯ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪನ್ಯಾಸಗಳ ಮೂಲಕವೂ ಸ್ವಸ್ಥ ಜೀವನಕ್ಕಾಗಿ ...

READ MORE

Related Books