
ಸಂಸಾರದಲ್ಲಿ ಮೂಡುವ ವಿರಸ, ಮನಸ್ತಾಪಗಳನ್ನು ಎದುರಿಸಬೇಕಾದ ಸಂಗತಿಗಳು ಬಹಳ. ಒಮ್ಮೊಮ್ಮೆ ನೋಡುತ್ತಲೇ ಜಗಳವಾಡುತ್ತಾ, ಒಬ್ಬರ ಮೇಲೊಬ್ಬರು ಆರೋಪ ಹೊರಿಸುತ್ತಾ, ಮಾತು ಬೆಳೆಸುತ್ತಾರೆ. ಅದೆಲ್ಲವೂ, ಸಂಸಾರಿಕ ಜೀವನದಲ್ಲಿ ಸಾಮಾನ್ಯವೇ. ಆದರೂ, ಹಲವು ದೃಷ್ಟಿಕೋನಗಳಿಂದ ಪರೀಕ್ಷಿಸಿ ಬಗೆಹರಿಸಿಕೊಳ್ಳುವ ಬಗೆ ತಿಳಿಯುವುದಿಲ್ಲ. ಹೀಗೆ ಮನಸ್ತಾಪಗಳು ಹೆಮ್ಮರವಾಗುತ್ತಾ ಮಕ್ಕಳೊಂದು ದಿಕ್ಕು, ತಾವೊಂದು ದಿಕ್ಕು ಎಂಬಂತಾಗುತ್ತದೆ. ಬಂದವರೊಂದಿಗೆ ಸಂಗಾತಿಯನ್ನು ದೂರುತ್ತಾ, ವೃದ್ದರನ್ನು ಬೈಯುತ್ತಾ, ಮತ್ತೊಬ್ಬರ ಮನೆಗೆ ಹೋಗಿ ಎಲ್ಲ ಗುಟ್ಟು ತಾಪತ್ರಯಗಳನ್ನು ಅವರ ಮುಂದೆ ಹರಡುತ್ತಾರೆ. ಈ ಎಲ್ಲವೈಮನಸ್ಸುಗಳನ್ನು ಪ್ರೀತಿಯಿಂದ, ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ಮಧುರ ದಾಂಪತ್ಯ ಸಾಗಿಸಲು ಲೇಖಕ ಗಿರಿಮನೆ ಶ್ಶಾಮರಾವ್ ಅವರು ಅನೇಕ ಸಲಹೆಗಳನ್ನು ನೀಡಿದ್ದಾರೆ.
©2025 Book Brahma Private Limited.