ಬದಲಾದರೆ ಯೋಚನೆ ಗೆಲುವು ನಿಮ್ಮದೇ

Author : ನಾಗ ಎಚ್. ಹುಬ್ಳಿ

Pages 146

₹ 150.00




Year of Publication: 2021
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್ಸ್
Address: # 745, 12 ನೇ ಮುಖ್ಯ ರಸ್ತೆ, 3 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560 010
Phone: 9945939436

Synopsys

’ಬದಲಾದರೆ ಯೋಚನೆ ಗೆಲುವು ನಿಮ್ಮದೇ’ ಕೃತಿಯು ನಾಗ ಎಚ್. ಹುಬ್ಳಿ ಅವರ ಕತಾ ಹಂದರವಾಗಿದೆ. 47 ಬಿಡಿಬರಹಗಳಿರುವ ಈ ಕೃತಿಯು ಬದುಕಿನ ಸಾರ್ವಕಾಲಿಕ ಜೀವನ ಮೌಲ್ಯಗಳ ಜೊತೆಗೆ ನೀತಿಪಾಠಗಳನ್ನು ತಿಳಿಸುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಮತ್ತು ಜೀವನದ ಯಶಸ್ಸಿಗೆ ಪ್ರೇರಕವಾದ ಸಣ್ಣ ಸಣ್ಣ ರೂಪಕ ಕಥೆಗಳನ್ನು ಹಾಗೂ ಘಟನೆಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಮನುಷ್ಯ ಅರಿತುಕೊಳ್ಳಬೇಕಾದ ವಿಚಾರಗಳ ಕುರಿತು ಆದರ್ಶ ಸೂತ್ರಗಳನ್ನು ನೀಡುವುದು ಬರಹಗಳ ಉದ್ದೇಶವಾಗಿದೆ ಎನ್ನುತ್ತಾರೆ ಲೇಖಕರು.

ಮನುಷ್ಯ ಜ್ಞಾನದ ಮಿತಿಗೆ ತಕ್ಕಂತೆ ಯೋಚಿಸುವುದರಿಂದ, ಸಮಸ್ಯೆಗಳು ಉದ್ಭವಿಸಿದಾಗ ಆ ಯೋಚನೆಗಳು ಅವನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದಿಲ್ಲ. ಕಾರಣ, ಆತ ಯೋಚಿಸುವ ರೀತಿ ಸಮರ್ಪಕವಾಗದೇ ಇರುವುದು. ಅಂತಹ ಸಂದರ್ಭದಲ್ಲಿ ವ್ಯಕ್ತಿ ಹೇಗೆ ಯೋಚನೆಯ ದಿಕ್ಕನ್ನೂ ಬದಲಾಯಿಸಿಬೇಕು, ಬದಲಾವಣೆ ಯಾವ ಬಗೆಯದಾಗಿರಬೇಕು ಎನ್ನುವ ಅಂಶಗಳನ್ನು ಕೇಂದ್ರೀಕರಿಸಿ ರಚಿತಗೊಂಡ ಕೃತಿ ಇದು.

About the Author

ನಾಗ ಎಚ್. ಹುಬ್ಳಿ

ಡಾ. ನಾಗ ಎಚ್. ಹುಬ್ಬಿ ಅವರು ಮೂಲತಃ ಹುಬ್ಬಳ್ಳಿಯವರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮ, ಕನ್ನಡದಲ್ಲಿ ಎಂ.ಎ. ಮತ್ತು ಪತ್ರಿಕೋದ್ಯಮದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಸದ್ಯ ಇವರು ರಾಂಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಹಲವಾರು ಪತ್ರಿಕೆಗಳಿಗೆ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಆದಿವಾಸಿಗಳನ್ನು ಕುರಿತು ಕಳೆದ 22 ವರ್ಷಗಳಿಂದ ಝಾರ್ಖಂಡ್, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸಗಢ, ನಿಕೋಬಾರ್ ದ್ವೀಪ, ಉತ್ತರಾಖಂಡ ಮುಂತಾದ ರಾಜ್ಯಗಳ ಆದಿವಾಸಿ ತಾಂಡಾಗಳಿಗೆ ನಿರಂತರ ಭೇಟಿ ನೀಡಿ ಜನಾಂಗೀಯ ಅಧ್ಯಯನ ನಡೆಸುತ್ತಿದ್ದಾರೆ. 'ಸರಹುಲ್', 'ಝಾರ್ಖಂಡ್ ಆದಿವಾಸಿ ಬದುಕು, ಆದಿವಾಸಿ ಸಂಸ್ಕೃತಿ' ಮತ್ತು 'ಅಸುರ' ಇವರ ಇತರ ಕೃತಿಗಳು. ...

READ MORE

Related Books